Consumers' Forum & RTI

70 ವರುಷದ ವೃದ್ಧೆಗೆ ಪೆನ್-ಷನ್ ಪಾವತಿಸುವ ಸಂದರ್ಭದಲ್ಲಿ “ಮಾನವೀಯವಾಗಿ ವರ್ತಿಸಿ” ಎಂದು ಬ್ಯಾಂಕಿಗೆ ಕೇಂದ್ರ ವಿತ್ತ ಸಚಿವೆ ಸೂಚಿಸಬೇಕಾಗಿ ಬಂದ ಪ್ರಕರಣ ಇದು.

ಒಡಿಸ್ಸಾ ರಾಜ್ಯದ ನಬರಂಗಪುರ ಜಿಲ್ಲೆಯ ಝರಿಗಾವೊನ್ ತಾಲೂಕಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರಾಂಚಿನ "ಬ್ಯಾಂಕ್ ಮಿತ್ರ" 70 ವರುಷದ ವೃದ್ಧೆ ಸೂರ್ಯ ಹರಿಜನ ಎಂಬಾಕೆಗೆ ಮಾಸಿಕ ಪೆನ್-ಷನ್ ಪಾವತಿಸಲಿಲ್ಲ. ಪೆನ್-ಷನ್ ಪಡೆಯಲೇ ಬೇಕೆಂದು ನಿರ್ಧರಿಸಿದ ವೃದ್ಧೆ, ತನ್ನ ಮನೆಯಿಂದ ಕೆಲವು ಕಿಮೀ ದೂರದ ಬ್ಯಾಂಕಿನ ಬ್ರಾಂಚಿಗೆ ಒಂದು ಪ್ಲಾಸ್ಟಿಕ್ ಕುರ್ಚಿಯನ್ನು ಊರುಗೋಲಿನಂತೆ ಬಳಸಿ, ಉರಿಬಿಸಿಲಿನಲ್ಲಿ ನಡೆದೇ ಬಂದಳು.

ಅಷ್ಟರಲ್ಲಿ ಇದನ್ನು ಯಾರೋ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟರು. ಆ ವಿಡಿಯೋ ವೈರಲ್ ಆಯಿತು! ಅದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೂ ಬಂತು. ಅವರು ತಕ್ಷಣವೇ ಟ್ವಿಟ್ಟರಿನಲ್ಲಿ ಸಂದೇಶವೊಂದನ್ನು ದಾಖಲಿಸಿದರು. ಅದರ ಮುಖ್ಯಾಂಶ: "ಮೆನೇಜರ್ ರೆಸ್ಪೊಂಡ್ ಮಾಡಿದ್ದಾರೆ ಆದರೂ ಅವರು ಮಾನವೀಯವಾಗಿ ವರ್ತಿಸಬೇಕೆಂದು ಆಶಿಸುತ್ತೇನೆ. ಬ್ಯಾಂಕ್ ಮಿತ್ರ ಯಾರೂ ಇಲ್ಲವೇ?" ಅನಂತರ, ದೇಶದ ಹಲವು ಪತ್ರಿಕೆಗಳಲ್ಲಿ ಹಾಗೂ ಟಿವಿ ಚಾನೆಲುಗಳಲ್ಲಿ ಇದು ದೊಡ್ಡ ಸುದ್ದಿಯಾಯಿತು.

ಕೇಂದ್ರ ವಿತ್ತ ಸಚಿವೆಯ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ವಿವರವಾದ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿತು. ಅದರ ಮುಖ್ಯಾಂಶಗಳು: ಇತ್ತೀಚೆಗೆ ದುರದೃಷ್ಟದ ಘಟನೆಯೊಂದು ನಡೆದಿದೆ. ಒಡಿಸ್ಸಾದ ನಬರಂಗಪುರ ಜಿಲ್ಲೆಯ ಝರಿಗಾವೊನ್ ತಾಲೂಕಿನ ಕಾಮನ್ ಸರ್ವಿಸ್ ಪ್ರೊವೈಡರ್ (ಬ್ಯಾಂಕ್ ಮಿತ್ರ) ಮೂಲಕ ಪೆನ್-ಷನ್ ಹಣ ಪಡೆಯಲು ಹಿರಿಯ ನಾಗರಿಕಳೊಬ್ಬಳಿಗೆ ಸಾಧ್ಯವಾಗಲಿಲ್ಲ. ಯಾಕೆಂದರೆ ಅವಳ ಮಸಕಾಗುತ್ತಿರುವ ಹೆಬ್ಬೆಟ್ಟಿನ ರೇಖೆಗಳನ್ನು ಬ್ಯಾಂಕ್ ಮಿತ್ರನ ಬಯೋಮೆಟ್ರಿಕ್ ರೀಡರ್ ಗುರುತಿಸಲಿಲ್ಲ.

ಭರ್ಗುರಾಮ್ ಮಹಾಧಿಕ್ ಮುಂಬೈಯ ಧನ್ವಂತರಿ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಘಟಕದಲ್ಲಿ ಫಿಟ್ಟರ್ ಆಗಿ ರೂ.೬,೦೦೦ ತಿಂಗಳ ಸಂಬಳಕ್ಕೆ ದುಡಿಯುತ್ತಿದ್ದರು.

೨೭ ಮಾರ್ಚ್ ೨೦೧೨ರಂದು ಕೆಲಸ ಮಾಡುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿತು. ಅವರ ಸಹೋದ್ಯೋಗಿಗಳು ಅವರನ್ನು ಫ್ಯಾಕ್ಟರಿಯೊಳಗಿನ ವಿಶ್ರಾಂತಿ ಕೋಣೆಗೆ ಕರೆದೊಯ್ದು ವಿರಮಿಸಲು ಹೇಳಿದರು. ಆದರೆ ಅವರ ಎದೆನೋವು ಹೆಚ್ಚಾಯಿತು. ಹಾಗಾಗಿ ಅವರನ್ನು ವಾಶಿಯಲ್ಲಿರುವ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಆಸ್ಪತ್ರೆಗೆ ಒಯ್ದರು.

ಆದರೆ ಮಹಾಧಿಕರು ಬದುಕಿ ಉಳಿಯಲಿಲ್ಲ. ಅದೇ ದಿನ ಆಸ್ಪತ್ರೆಯು ನೀಡಿದ ಸರ್ಟಿಫಿಕೇಟಿನ ಅನುಸಾರ “ಆಸ್ಪತ್ರೆಗೆ ಅವರನ್ನು ತರುವಾಗಲೇ ಪ್ರಾಣ ಹೋಗಿತ್ತು”. ಅನಂತರ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ನೀಡಿದ ಸರ್ಟಿಫಿಕೇಟಿನಲ್ಲಿ ಬರೆಯಲಾದ ಅವರ ಸಾವಿನ ಕಾರಣ, “ಹೃದಯಾಘಾತ”. ಆಗ ಮಹಾಧಿಕರಿಗೆ ೫೦ ವರುಷ ವಯಸ್ಸು.

ಭರ್ಗುರಾಮ್ ಮಹಾಧಿಕ್ ಉದ್ಯೋಗಿಗಳ ರಾಜ್ಯ ವಿಮಾ ಸಂಸ್ಥೆಯ (ಇಎಸ್ಐಸಿ) ವಿಮಾ ಯೋಜನೆಯಲ್ಲಿ ಹೆಸರು ನೋಂದಾಯಿಸಿದ್ದರು. ಆದ್ದರಿಂದ ಧನ್ವಂತರಿ ಇಂಜಿನಿಯರ್ಸ್ ಘಟಕವು ಮಹಾಧಿಕರ ವಾರೀಸುದಾರರ ಹಕ್ಕುಸಾಧನೆ ಅರ್ಜಿಯನ್ನು ಇಎಸ್ಐ ಕಾಯಿದೆ ಪ್ರಕಾರ ೧೧ ಎಪ್ರಿಲ್ ೨೦೧೨ರಂದು ಇಎಸ್ಐ ಸಂಸ್ಥೆಗೆ ಸಲ್ಲಿಸಿತ್ತು. ಆದರೆ ೧೪ ಮೇ ೨೦೧೨ರಂದು ಅದು ಆ ಅರ್ಜಿಯನ್ನು ಈ ಮುಖ್ಯ ಕಾರಣಕ್ಕಾಗಿ ನಿರಾಕರಿಸಿತು, “ಮೃತರಾದ ಮಹಾಧಿಕರನ್ನು ಇಎಸ್ಐಸ್ ಕಾಯಿದೆ ಪ್ರಕಾರ ಉದ್ಯೋಗಿ ಎಂದು ಪರಿಗಣಿಸಲಾಗದು.”

ಹಕ್ಕುಸಾಧನೆಯ ನಿರಾಕರಣ ಪತ್ರದಲ್ಲಿ ತಿಳಿಸಲಾದ ಇನ್ನೊಂದು ಕಾರಣ: ವಿಮಾ ಪಾಲಿಸಿದಾರನು ಸಹಜ ಕಾರಣಗಳಿಂದಾಗಿ ಮೃತನಾಗಿದ್ದಾನೆ; ಕೆಲಸದ ಒತ್ತಡ ಮತ್ತು ದಣಿವಿನಿಂದಾಗಿ ಅವನ ಸಾವು ಸಂಭವಿಸಿಲ್ಲ.

ರೋಗ ಪರೀಕ್ಷಾ ಕೇಂದ್ರಗಳು ಅಥವಾ ಆಸ್ಪತ್ರೆಗಳು ತಪ್ಪು ವರದಿ ನೀಡಿದರೆ ........ ದೀಪ್ತಿ ಷಾ ಅವರು ಅನುಭವಿಸಿದ ವೇದನೆ ಇದಕ್ಕೊಂದು ಉದಾಹರಣೆ.


ತೀವ್ರ ಹೊಟ್ಟೆನೋವಿನಿಂದ ಸಂಕಟ ಪಡುತ್ತಿದ್ದರು ದೀಪ್ತಿ ಷಾ. ಅವರ ಹೊಟ್ಟೆಯ ಸೊನೊಗ್ರಾಮ್ ತೆಗೆಯಲಾಯಿತು. ಅದರಲ್ಲಿ ಒವೇರಿಯನ್ ಸಿಸ್ಟ್ ಕಾಣಿಸಿತು. ಅದನ್ನು ಪರಿಶೀಲಿಸಿದ ಗೈನಕಾಲಜಿಸ್ಟ್ ಸಿಎ - ೧೨೫ ಎಂಬ ರಕ್ತದ ಪರೀಕ್ಷೆ ಮಾಡಿಸಲು ಸಲಹೆಯಿತ್ತರು. ಶ್ರೀಮತಿ ಷಾ ರೋಗ ಪರೀಕ್ಷಾ ಕೇಂದ್ರ (ಪ್ಯಾಥೊಲೋಜಿಕಲ್ ಲ್ಯಾಬ್)ಕ್ಕೆ ತನ್ನ ರಕ್ತದ ಸ್ಯಾಂಪಲ್ ನೀಡಿ, ರೂಪಾಯಿ ೭೦೦ ಶುಲ್ಕವನ್ನೂ ಪಾವತಿಸಿದರು.



ಈ ರಕ್ತಪರೀಕ್ಷೆಯ ವರದಿ, ದೀಪ್ತಿ ಷಾ ಅವರಿಗೆ ಕ್ಯಾನ್ಸರ್ ತಗಲಿರುವ ಸಾಧ್ಯತೆಯನ್ನು ಸೂಚಿಸಿತು. ಆದರೆ, ಗೈನಕಾಲಜಿಸ್ಟ್ಗ್ ಅವರಿಗೆ ವರದಿಯ ಬಗ್ಗೆ ಅನುಮಾನ ಮೂಡಿತು. ಇನ್ನೊಂದು ಲ್ಯಾಬೊರೇಟರಿಯಲ್ಲಿ ಅದೇ ಪರೀಕ್ಷೆ ಪುನಃ ಮಾಡಿಸಲು ಸಲಹೆಯಿತ್ತರು. ಮರುದಿನವೇ, ದೀಪ್ತಿ ಷಾ ಪುನಃ ತನ್ನ ರಕ್ತ ಪರೀಕ್ಷೆ ಮಾಡಿಸಿದರು. ಇದರಿಂದಲೂ ಅವರಿಗೆ ಕ್ಯಾನ್ಸರ್ ತಗಲಿದೆಯೆಂಬುದು ಖಚಿತವಾಗಲಿಲ್ಲ. ಹಾಗಾಗಿ, ಮೂರನೆಯ ಸಲ ಅದೇ ರಕ್ತಪರೀಕ್ಷೆ ಮಾಡಿಸಿದರು. ಎರಡನೇ ಹಾಗೂ ಮೂರನೇ ರಕ್ತಪರೀಕ್ಷೆ ಪ್ರಕಾರ ಅವರ ಸಿಎ - ೧೨೫ ಮಟ್ಟ "ನಾರ್ಮಲ್" ಆಗಿತ್ತು.


ದೀಪ್ತಿ ಷಾ ಅವರಿಗೆ ಆತಂಕ ಆಗದಿದ್ದೀತೇ? ಅವರು ತಪ್ಪು ವರದಿ ನೀಡಿದ ರೋಗ ಪರೀಕ್ಷಾ ಕೇಂದ್ರಕ್ಕೆ ಪತ್ರ ಬರೆದರು: ರಕ್ತಪರೀಕ್ಷಾ ಶುಲ್ಕ ರೂ.೭೦೦ ಮರುಪಾವತಿಸಬೇಕೆಂದೂ, "ತೀವ್ರ ಮಾನಸಿಕ ಒತ್ತಡ ಹಾಗೂ ಸಂಕಟ" ನೀಡಿದ್ದಕ್ಕಾಗಿ ರೂ.೨೦,೦೦೦ ಪರಿಹಾರ ಪಾವತಿಸಬೇಕೆಂದೂ ವಿನಂತಿಸಿದರು. ಅನಂತರ ದೀಪ್ತಿ ಷಾ ಅಹ್ಮದಾಬಾದಿನ ಹೆಸರುವಾಸಿ ಬಳಕೆದಾರರ ಸಂಘಟನೆ "ಬಳಕೆದಾರರ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ"ಗೆ ದೂರು ಕೊಟ್ಟರು. ಸೊಸೈಟಿಯಿಂದಲೂ ಆ ರೋಗ ಪರೀಕ್ಷಾ ಕೇಂದ್ರಕ್ಕೆ ಪತ್ರ ಬರೆದು ಷಾ ಅವರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಆದರೆ ರೋಗ ಪರೀಕ್ಷಾ ಕೇಂದ್ರವು ತನ್ನದೇನೂ ತಪ್ಪಿಲ್ಲವೆಂದು ವಾದಿಸಿತು. ಆದ್ದರಿಂದ ದೀಪ್ತಿ ಷಾ ಬಳಕೆದಾರರ ಕೋರ್ಟಿಗೆ ದೂರು ನೀಡಬೇಕಾಯಿತು.



ಮೈಸೂರಿನ ಎಂಇಎಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಆಶಾ (ಹೆಸರು ಬದಲಾಯಿಸಲಾಗಿದೆ) ತನ್ನ ಮೂಗಿನ ಸಮಸ್ಯೆ ಸರಿಪಡಿಸಲಿಕ್ಕಾಗಿ ಸರ್ಜರಿ ಮಾಡಿಸಿಕೊಂಡು ಪಟ್ಟ ಪಾಡು ಆಕೆಗೇ ಗೊತ್ತು.



ಆಶಾಳ "ಸೀಳುತುಟಿ" ಸರಿಪಡಿಸಲಿಕ್ಕಾಗಿ ಅವಳಿಗೆ ಬಾಲ್ಯದಲ್ಲಿ ಸರ್ಜರಿ ಮಾಡಿಸಲಾಗಿತ್ತು. ಆದರೂ ಅವಳ ಮೂಗಿನಲ್ಲೊಂದು ದೋಷ ಉಳಿದಿತ್ತು. ಇದನ್ನು ಹೋಗಲಾಡಿಸಲು ಬೆಂಗಳೂರಿನ "ಗಣೇಶ್ ನರ್ಸಿಂಗ್ ಹೋಂ"ನಲ್ಲಿ ಇನ್ನೊಂದು ಸರ್ಜರಿ ಮಾಡಿದರು - ಕಾಸ್ಮೆಟಿಕ್ ಸರ್ಜನ್ ಡಾಕ್ಟರ್ ಎಂ.



ಅನಂತರ ಆಶಾಗೆ ಹೊಸತೊಂದು ಸಮಸ್ಯೆ: ಅವಳ ಮೂಗಿನಿಂದ ದುರ್ವಾಸನೆ ಬರಲು ಆರಂಭ. ಪುನಃ ತನ್ನ ಮೂಗನ್ನು ಆಕೆ ಡಾಕ್ಟರಿಗೆ ತೋರಿಸಿದಳು. ಅವರು ಔಷಧಿಗಳನ್ನು ಬರೆದಿತ್ತು, ಮೂಗಿಗೆ ಒಂದು ಮುಲಾಮು ಹಚ್ಚಲು ಸೂಚಿಸಿದರು. ಆ ಚಿಕಿತ್ಸೆ ಮಾಡಿದರೂ ಆಶಾಳ ಮೂಗಿನ ದುರ್ನಾತ ನಿಲ್ಲಲಿಲ್ಲ. ಆ ಕೆಟ್ಟ ವಾಸನೆ ಎಷ್ಟು ತೀವ್ರವಾಗಿತ್ತೆಂದರೆ, ಅವಳು ಹಾಸ್ಟೆಲ್ ಬಿಟ್ಟು ಹೋಗಬೇಕೆಂದು ವಾರ್ಡನರಿಂದ ಆದೇಶ.

ಕ್ಲಾಸಿನಲ್ಲಿ ಅವಳ ಹತ್ತಿರ ಕುಳಿತುಕೊಳ್ಳಲು ಸಹಪಾಠಿಗಳಿಂದ ನಿರಾಕರಣೆ. ಮೂಗಿನ ದುರ್ವಾಸನೆ ಹೋಗಲಾಡಿಸಿದ ನಂತರವೇ ಕ್ಲಾಸಿಗೆ ಹಾಜರಾಗಬೇಕೆಂದು ಪ್ರಾಧ್ಯಾಪಕರಿಂದಲೂ ಆದೇಶ.

ವಿಧಿಯಿಲ್ಲದೆ ಡಾ. ಎಂ. ಅವರಲ್ಲಿ ಮತ್ತೊಮ್ಮೆ ತನ್ನ ಅವಸ್ಥೆ ಹೇಳಿಕೊಂಡಳು ಆಶಾ. ಅವರು ಮಾಡಿದ್ದೇನು? ಮತ್ತೊಂದು ಸರ್ಜರಿ ಮಾಡಿದರು. ಅನಂತರ ಆಶಾ ಪುನಃ ಕಾಲೇಜಿಗೆ ಹಾಜರಾದಳು. ಆದರೆ ಅವಳ ಮೂಗಿನ ದುರ್ನಾತ ಹಾಗೇ ಇತ್ತು. ಆದ್ದರಿಂದ, ಈ ಹಂತದಲ್ಲಿ ಅವಳನ್ನು ಹಾಸ್ಟೆಲಿನಿಂದ ಹೊರ ಹಾಕಲಾಯಿತು.



ಆಗ, ತನ್ನೂರಿಗೆ ಹಿಂತಿರುಗಿದಳು ಆಶಾ. ಹೆತ್ತವರೊಂದಿಗೆ ತನ್ನ ಸಂಕಟ ಹೇಳಿಕೊಂಡಳು. ಅವರು ಮಲೆನಾಡು ಆಸ್ಪತ್ರೆಯ ಡಾ. ರವಿಪ್ರಕಾಶರನ್ನು ಸಂಪರ್ಕಿಸಿದರು. ಈ ಡಾಕ್ಟರು ಸರ್ಜರಿ ಮಾಡಿದಾಗ ಕಂಡದ್ದೇನು? ಆಶಾಳ ಮೂಗಿನೊಳಗೊಂದು ಚಿಕಿತ್ಸಾ ಹತ್ತಿ (ಅಂದರೆ ಕಾಟನ್ ಗಾಜ್) ತುಂಡು. ಇದನ್ನು ಹೊರ ತೆಗೆದ ಡಾಕ್ಟರ್, ಈ ಸತ್ಯಾಂಶದ ಬಗ್ಗೆ ಸರ್ಟಿಫಿಕೇಟ್ ಬರೆದುಕೊಟ್ಟರು. ಅನಂತರ ಆಶಾಳ ಮೂಗಿನಿಂದ ದುರ್ವಾಸನೆ ಬರಲಿಲ್ಲ.



ಇವರಿಂದ: ಹೆಚ್. ಚಂದ್ರನಾಯ್ಕ, ನಾಲ್ಕೂರು - 576 234

ಇವರಿಗೆ: ಕಾರ್ಯನಿರ್ವಹಣಾಧಿಕಾರಿಯವರು,

ತಾಲೂಕು ಪಂಚಾಯತ್, ಉಡುಪಿ- 576 101


ಮಾನ್ಯರೇ,
ವಿಷಯ: ಗಿರಿಯ ನಾಯ್ಕರ ಮನೆಯಿಂದ ಅಂಕ್ರಾಲುವರೆಗಿನ ಪಂಚಾಯತ್ ರಸ್ತೆಯನ್ನು ಮುಚ್ಚಿರುವ ಕುರಿತು.
ಉಲ್ಲೇಖ: 1. ಅಕ್ರಮಣದಿಂದ ತೊಂದರೆಗೊಳಗಾಗಿರುವ ನಾಗರಿಕರು ನಿಮಗೆ ಸಲ್ಲಿಸಿರುವ ದೂರು ಹಾಗೂ ನೆನಪಿನೋಲೆಗಳು
2. ಬಸ್ರೂರು ಬಳಕೆದಾರರ ವೇದಿಕೆಯು ನಿಮಗೆ ಬರೆದಿರುವ ಪತ್ರ (25-12-02).
3. ಉಡುಪಿ ಜಿಲ್ಲಧಿಕಾರಿಯವರು ನಿಮಗೆ ಬರೆದ ಪತ್ರ (30-11-02)
4. ಆಕ್ರಮಿತ ದಾರಿ ಪಂಚಾಯತ್ ರಸ್ತೆ ಎನ್ನುವ ದೃಢೀಕರಣ (ನಾಲ್ಕೂರು ಗ್ರಾಮ ಪಂಚಾಯತ್ 23-10-02).

ನಾಲ್ಕೂರು ಗ್ರಾಮದ ಗಿರಿಯ ನಾಯ್ಕರ ಮನೆಯಿಂದ ಅಂಕ್ರಾಲು ತನಕದ ಗ್ರಾಮ ಪಂಚಾಯತ್‍ಗೆ ಸೇರಿರುವ ರಸ್ತೆಯೊಂದನ್ನು ಸ್ಥಳೀಯರು ಅನೇಕರು ಸೇರಿ ರಾತ್ರೋ ರಾತ್ರಿ ಆಕ್ರಮಿಸಿರುತ್ತಾರೆ. ಅನಾದಿಯಿಂದ ಸಾರ್ವಜನಿಕರು ಉಪಯೋಗಿಸುತ್ತಿದ್ದ ರಸ್ತೆಯನ್ನು ಆಕ್ರಮಣದಿಂದ ತೆರವುಗೊಳಿಸಿ ಸಂಚಾರ ಯೋಗ್ಯವಾಗಿಸುವಂತೆ ಕೋರಿ ನಿಮಗೆ ಉಲ್ಲೇಖದಂತೆ ಪತ್ರಗಳನ್ನು ಬರೆದಿರುತ್ತೇವೆ.


ನಮ್ಮ ಮನವಿಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ಜಿಲ್ಲಾಧಿಕಾರಿಯವರು ನಿಮಗೆ ಆದೇಶ ನೀಡಿದ್ದಾರೆ. ಸಾಕಷ್ಟು ಪ್ರಯತ್ನಗಳನ್ನು ನಡೆಸಿದ ಹೊರತಾಗಿಯೂ ಸಮಸ್ಯೆ ಪರಿಹಾರಗೊಂಡಿಲ್ಲ. ಭೂದಾಹಿಗಳ ಪ್ರಭಾವ, ರಾಜಕೀಯ ಒತ್ತಡಗಳಿಗೆ ಮಣಿಯದೆ ಸದ್ರಿ ಆಕ್ರಮಣವನ್ನು ನೀವು ಇನ್ನಷ್ಟು ವಿಳಂಬವಿಲ್ಲದೆ ತೆರವುಗೊಳಿಸಬೇಕಾಗಿದೆ.


ವಿಶ್ವಾಸ ಪೂರ್ವಕ,
ಹೆಚ್. ಚಂದ್ರನಾಯ್ಕ ಮತ್ತು ಇತರರು
ದಿನಾಂಕ: 1-01-2003

ಯಥಾ ಪ್ರತಿ: ಬಳಕೆದಾರರ ವೇದಿಕೆ, ಬಸ್ರೂರು. 576 211

ಪ್ರಾತಿನಿಧಿಕ ಫೋಟೋ: ಹಳ್ಳಿ ರಸ್ತೆ

ಸಂಗ್ರಹ: ಬಳಕೆದಾರರ ಶಿಕ್ಷಣ, 20-01-2003

ರಾಮಮೂರ್ತಿ ಕೆ., S/o. ಜಯರಾಮ ಶಾಸ್ತ್ರಿ, ‘ಅನುಗ್ರಹ’, 80,
ಬಡಗಬೆಟ್ಟು, ಪರ್ಕಳ - 576 123- ಇವರಿಂದ

ನಿರ್ದೇಶಕರು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ,
ಆರನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು -560003 - ಇವರಿಗೆ

ಮಾನ್ಯರೇ,
ವಿಷಯ: ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ದ್ವಿತೀಯ ಪ್ರತಿಯನ್ನು ಕೋರಿ.
ಉಲ್ಲೇಖ: 1. ಅಂಕಪಟ್ಟಿಯ ದ್ವಿತೀಯ ಪ್ರತಿ ಕೋರಿ ಕಾಲೇಜಿನ ಮೂಲಕ ಸಲ್ಲಿಸಿರುವ ಅರ್ಜಿ ಸಂಖ್ಯೆ 156/01-02/18.10.01.
2. ರೂ. 200ರ ಬ್ಯಾಂಕ್ ಹುಂಡಿ.
3. ನನ್ನ ನೆನಪಿನೋಲೆಗಳು ತಾ. 4-4-02, 3.7.02
4. ಕಾಲೇಜು ಪ್ರಾಂಶುಪಾಲರ ನೆನಪಿನೋಲೆ ತಾ. 8-5-02

ಎಸ್.ಎಸ್.ಎಲ್.ಸಿ.ಯ ನನ್ನ ಅಂಕಪಟ್ಟಿಯ ದ್ವಿತೀಯ ಪ್ರತಿಯನ್ನು ಕೋರಿ ನಿಮಗೆ ಅರ್ಜಿ ಸಲ್ಲಿಸಿ ಹದಿನೈದು
ತಿಂಗಳುಗಳೇ ಸಂದಿವೆ. ಉಲ್ಲೇಖದಂತೆ ನಾನು ಹರಸಾಹಸವನ್ನು ಮಾಡಿದ್ದರೂ ನೀವು ಅಂಕಪಟ್ಟಿಯನ್ನು ನೀಡದಿರುವುದರಿಂದ ಉದ್ಯೋಗಕ್ಕೆ ಸೇರಲು ನನಗೆ ತೊಡಕು ಉಂಟಾಗಿದೆ. ಅಂಕಪಟ್ಟಿಯ ದ್ವಿತೀಯ
ಪ್ರತಿಯನ್ನು ನೀಡದ ನೀವು ನನ್ನ ಪತ್ರಗಳಿಗೂ ಉತ್ತರಿಸದಿರುವುದರ ಹಿನ್ನೆಲೆಯನ್ನು ಏನೆಂದು ತಿಳಿದುಕೊಳ್ಳಬೇಕು? ನಿಮ್ಮ ನಿಷ್ಕ್ರಿಯತೆ ವಿದ್ಯಾರ್ಥಿಗಳ ಜೀವನದಲ್ಲಿ ಅದೆಂತಹ ಬಿರುಗಾಳಿಯನ್ನು ತಂದೊಡ್ಡುತ್ತದೆಂದು ನೀವು ಊಹಿಸಿದಂತಿಲ್ಲ.
ಅಂಕಪಟ್ಟಿಯ ದ್ವಿತೀಯ ಪ್ರತಿ ದೊರೆಯಲು ಇನ್ನೇನು ಮಾಡಬೇಕು?

ನಿಮ್ಮ ವಿಶ್ವಾಸಿ,
ರಾಮಮೂರ್ತಿ ಕೆ.
ದಿನಾಂಕ: 01-01-2003

ಯಥಾ ಪ್ರತಿ: ಬಳಕೆದಾರರ ವೇದಿಕೆ, ಬಸ್ರೂರು. 576 211.
ವೇದಿಕೆಯ ಬೆಂಬಲ: ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಸ್ಪಂದಿಸದಿರುವುದರಿಂದ ಅಂಕಪಟ್ಟಿಯ ದ್ವಿತೀಯ ಪ್ರತಿಯನ್ನು ಗಳಿಸಲು ರಾಮಮೂರ್ತಿ ಹೋರಾಟವನ್ನೆ ನಡೆಸಬೇಕಾಗಿದೆ!
ನಿಗದಿತ ಅರ್ಜಿ, ಅಫಿದಾವಿತ್, ಬ್ಯಾಂಕ್ ಹುಂಡಿಗಳನ್ನು ನೀಡಿ ವರ್ಷಗಳು ಉರುಳಿದರೂ ಅಂಕಪಟ್ಟಿಯ ಪ್ರತಿ ದೊರೆತಿಲ್ಲ.

ಪಾಲಿಸಿಗಳ ಮೇಲೆ ಸಾಲ ಮಂಜೂರು ಮಾಡುವಾಗ, ಫಲಪ್ರದ ಮೊಬಲಗು ನೀಡುವಾಗ, ಬೋನಸ್ ಹಣ ಪಾವತಿಸುವಾಗ ಕೆಜಿಐಡಿ ಕಚೇರಿಯು ಪಾಲಿಸಿದಾರರಿಗೆ ಕಿರುಕುಳ ನೀಡುವುದು ಮನೆಮಾತಾಗಿದೆ. ಆದರೆ ಕೆಲವು ಮಂದಿ ಪಾಲಿಸಿದಾರರಿಗೆ ಏನೂ ವಿಳಂಬವಿಲ್ಲದೆ ಮತ್ತು ಯಾವ ಆಕ್ಷೇಪಣೆಯನ್ನೂ ಹಾಕದೆ ತಕ್ಷಣ ಹಣ ಪಾವತಿ ಮಾಡುವುದೂ ಈ ಅಧಿಕಾರಿಗಳಿಗೆ ತಿಳಿದಿದೆ. ತಕ್ಷಣ ಹಣ ಪಡೆಯಲು ಏನು ಮಾಡಬೇಕೆಂದು ಆ ಪಾಲಿಸಿದಾರರಿಗೂ ತಿಳಿದಿದೆ. ಪಾಪ ಏನು ಮಾಡಬೇಕೆಂಬ ‘ಗುಟ್ಟು’ ತಿಳಿಯದ ಅಮಾಯಕರು ಕಿರುಕುಳಕ್ಕೆ ಒಳಗಾಗುತ್ತಾರೆ. ಹೀಗೆ ಶೋಷಣೆಗೊಳಗಾದ ನಿವೃತ್ತ ಶಿಕ್ಷಕರೊಬ್ಬರ ಕತೆ ಓದಿ.

ಬಿ. ಮಂಜಯ್ಯ ಇವರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಬೈಂದೂರು ಇಲ್ಲಿ ಶಿಕ್ಷಕರಾಗಿದ್ದು ಈಗ ನಿವೃತ್ತರಾಗಿದ್ದಾರೆ. ವೃತ್ತಿಯಲ್ಲಿರುವಾಗಲೇ ಅಂದರೆ 1995 ನವೆಂಬರ್ ತಿಂಗಳಲ್ಲಿಯೇ ಇವರ ಕೆಜಿಐಡಿ ವಿಮಾ ಪಾಲಿಸಿ
ಫಲಪ್ರದಗೊಂಡಿತ್ತು. ಕ್ಲೇಮ್ ಸಲ್ಲಿಸಿ ಒಂದು ತಿಂಗಳ ನಂತರ ಫಲಪ್ರದ ಮೊಬಲಗು ಪಾವತಿಯಾಗಿತ್ತು. ಆದರೆ ಅದರೊಂದಿಗೆ ಬೋನಸ್ ಹಣ ಕೊಟ್ಟಿರಲಿಲ್ಲ. ಬೋನಸ್ ಹಣವನ್ನು ಹಿಂದಿನಿಂದ ಕಳುಹಿಸಲಾಗುವುದೆಂದು ವಿಮಾಧಿಕಾರಿಗಳು ತಿಳಿಸಿದ್ದರು.

ಮಂಜಯ್ಯ ಇವರು ಮಂಗಳೂರು ವಿಮಾಧಿಕಾರಿಯವರಿಗೆ ಪತ್ರ ಬರೆದು ಬೋನಸ್ ಹಣ ಕಳುಹಿಸಿಕೊಡುವಂತೆ ಕೇಳುತ್ತಲೇ ಇದ್ದರು. ಅಂತೂ 1997ರ ಮಧ್ಯ ಭಾಗದಲ್ಲಿ ಮಂಗಳೂರು

ವಿಮಾಧಿಕಾರಿಯವರು ಬೋನಸ್ ಹಣದ ಬಗ್ಗೆ ಪಾವತಿ ರಶೀದಿಯೊಂದನ್ನು ಕಳುಹಿಸಿಕೊಟ್ಟು ಇದಕ್ಕೆ ಸ್ಟಾಂಪ್ ಅಂಟಿಸಿ ದಸ್ಕತು ಮಾಡಿ ಕಳುಹಿಸುವಂತೆ ತಿಳಿಸಿದರು. ಮಂಜಯ್ಯನವರು ಹಣ ಬಂದಷ್ಟೇ ಸಂತೋಷದಿಂದ ಪಾವತಿ ರಶೀದಿಗೆ ದಸ್ಕತು ಹಾಕಿ ಕಳುಹಿಸಿ ಕೊಟ್ಟರು. ಆದರೆ ರಶೀದಿ ಕಳುಹಿಸಿಕೊಟ್ಟು 6 ತಿಂಗಳು ಕಾದರೂ ಬೋನಸ್ ಹಣದ ಸುದ್ದಿ ಇಲ್ಲ.

ಕುಂದಾಪುರ ತಾಲೂಕು ಹಂಗ್ಲೂರಿನ ಶ್ರೀ ಹೆಚ್. ಸತ್ಯನಾರಾಯಣ ರಾವ್ ಎನ್ನುವವರ ಮನೆ ಮತ್ತು ಬಚ್ಚಲು ಮನೆಯ ಮೇಲೆ ನೆರೆಮನೆಯವರ ತೆಂಗಿನ ಮರವೊಂದು ಎರಗಿತ್ತು. ಆಗಾಗ ಅದರ ಕಾಯಿ ಮತ್ತು ಹೆಡೆಗಳು ಬಿದ್ದು ಹಂಚು ಒಡೆದು ಹೋಗಿ ಇವರಿಗೆ ಅಪಾರ ನಷ್ಟವುಂಟಾಗುತ್ತಿತ್ತು. ಇಂತಹ ಅಪಾಯಕಾರಿ ಮರವನ್ನು ಕಡಿಸಬೇಕೆಂಬ ಮನವಿಗೆ ನೆರೆಯವರು ಕಿವಿಗೊಡದಿದ್ದುದರಿಂದ 1983ರಲ್ಲಿ ಕುಂದಾಪುರ ಅಸಿಸ್ಟೆಂಟ್ ಕಮೀಷನರಿಗೆ ದೂರು ನೀಡಿದರು. ಆಸಿಸ್ಟೆಂಟ್ ಕಮೀಷನರು
ಸ್ಥಳೀಯ ಪಂಚಾೈತ್ ಕಾರ್ಯದರ್ಶಿಯವರಿಗೆ ಆದೇಶ ನೀಡಿ ಕೂಡಲೇ ಮರ ಕಡಿಸುವಂತೆ ತಿಳಿಸಿದರು. ಆದರೆ ನೆರೆಮನೆಯವರು ಆಸಿಸ್ಟೆಂಟ್ ಕಮೀಷನರಿಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದರು.

ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಆಸಿಸ್ಟೆಂಟ್ ಕಮೀಷನರು 1997ರಲ್ಲಿ ಅರ್ಜಿಯನ್ನು ತಿರಸ್ಕರಿಸಿ ಪಂಚಾೈತ್ ಕಾರ್ಯದರ್ಶಿಯವರಿಗೆ ಆದೇಶ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಎಂಟು ತಿಂಗಳ ತರುವಾಯ ಪಂಚಾೈತ್ ಸಭೆಯಲ್ಲಿ ನೆರೆಮನೆಯವರು ಸದ್ರಿ ಮರಕ್ಕೆ ಸರಿಗೆ ಹಾಕಿ ಎಳೆದು ಕಟ್ಟುವಂತೆ ತಿಳಿಸಬೇಕೆಂದು ನಿರ್ಣಯ ಕೈಗೊಳ್ಳಲಾಯಿತು.

ಆದರೆ ಪಂಚಾೈತ್ ನಿರ್ಣಯವೂ ಅನುಷ್ಠಾನಕ್ಕೆ ಬರಲಿಲ್ಲ. ನಿರುಪಾಯರಾದ ಹೆಚ್. ಸತ್ಯನಾರಾಯಣ ರಾಯರು ಉಡುಪಿ ಜಿಲ್ಲಾಧಿಕಾರಿಯವರಿಗೆ ಒಂದು ಪತ್ರ ಬರೆದು ಯಥಾಪ್ರತಿಯನ್ನು ಬಸ್ರೂರು ಬಳಕೆದಾರರ ವೇದಿಕೆಗೆ ಕಳುಹಿಸಿಕೊಟ್ಟರು. ಮಾನ್ಯ ಜಿಲ್ಲಾಧಿಕಾರಿಯವರು ಕುಂದಾಪುರ ತಾಲೂಕು ಪಂಚಾೈತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ಬರೆದು ಈ ಸಂಬಂಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ತನಗೆ ವರದಿ ಕಳುಹಿಸಿಕೊಡಬೇಕೆಂದು ತಿಳಿಸಿದರು.

ಕುಂದಾಪುರ ತಾಲೂಕು ಹಂಗ್ಲೂರಿನ ಹೆಚ್. ಸತ್ಯನಾರಾಯಣ ರಾವ್ ಎನ್ನುವವರು ಇಂದಿಗೆ ಸುಮಾರು 16 ವರ್ಷಗಳ ಹಿಂದೆ ಒಂದು ನ್ಯಾಯಬದ್ಧ ಹೋರಾಟ ಪ್ರಾರಂಭಿಸಿದರು. ನೆರೆಮನೆಯವರ ತೆಂಗಿನ ಮರವೊಂದು ಇವರ ಮನೆ ಮತ್ತು ಬಚ್ಚಲು ಮನೆಯ ಮಾಡಿನ ಮೇಲೆ ವಾಲಿಕೊಂಡಿತ್ತು. ತೆಂಗಿನಕಾಯಿ ಹಾಗೂ ಹೆಡೆಗಳು ಆಗಾಗ ಮಾಡಿನ ಮೇಲೆ ಬಿದ್ದು ಹಂಚು ಮತ್ತು ಪಕ್ಕಾಸುಗಳು ತುಂಡಾಗಿ ವಾರ್ಷಿಕ ಸುಮಾರು 200- 300ರೂ.ಗಳ ನಷ್ಟವುಂಟಾಗುತ್ತಿತ್ತು. ನೆರೆಮನೆಯವರು ಇವರ ಬಾಯ್ದೆರೆ ಮಾತಿಗೆ ಕಿವಿಗೊಡದಿದ್ದಾಗ 1983 ಜನವರಿಯಲ್ಲಿ ಕುಂದಾಪುರ ಆಸಿಸ್ಟೆಂಟ್ ಕಮೀಷನರಿಗೆ ಒಂದು ಪತ್ರ ಬರೆದು ತನಗಾಗುವ ನಷ್ಟವನ್ನು ವಿವರಿಸಿದ್ದಲ್ಲದೆ, ಮನೆಯಲ್ಲಿರುವ ಜನ, ಜಾನುವಾರುಗಳಿಗೆ ಪ್ರಾಣ ಹಾನಿಯಾಗುವ ಸಂಭವವನ್ನೂ ತಿಳಿಸಿದ್ದರು, ಸ್ವತ: ತನಿಖೆ ನಡೆಸಿ ತನಗೆ ನ್ಯಾಯವೊದಗಿಸಬೇಕೆಂದು ಕೇಳಿಕೊಂಡಿದ್ದರು.

ಕೋರ್ಟಿನ ಮೆಟ್ಟಿಲು ಹತ್ತಿದ ಪ್ರಕರಣ
ಆಗಿನ ಆಸಿಸ್ಟೆಂಟ್ ಕಮೀಷನರರ ಆದೇಶದ ಮೇರೆಗೆ ಹಂಗ್ಲೂರು ಪಂಚಾಯತು ಕಾರ್ಯದರ್ಶಿಯವರು ಸ್ಥಳ ಪರಿಶೀಲನೆ ನಡೆಸಿ ಮರವನ್ನು ಕೂಡಲೇ ಕಡಿಸಬೇಕೆಂದು ಎಚ್ಚರಿಕೆ ಕೊಟ್ಟು ಹೋದರು. ಆದರೆ ನೆರೆಮನೆಯವರು ಆ ಎಚ್ಚರಿಕೆಯ ವಿರುದ್ಧ ಕುಂದಾಪುರ ಆಸಿಸ್ಟೆಂಟ್ ಕಮೀಷನರ ಕೋರ್ಟಿನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದರು.
ಇದು ತಾತ್ಕಾಲಿಕ ತಡೆಯಾಜ್ಞೆಯಾಗಿತ್ತು. ಮೇಲ್ಮನವಿ ಅರ್ಜಿಯ ವಿಚಾರಣೆ ಮುಗಿಸಿ ಮಾನ್ಯ ಆಸಿಸ್ಟೆಂಟ್ ಕಮೀಷನರ್ ಕುಂದಾಪುರ ಇವರು ತಾ. 20-10-97ರಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿ ಆದೇಶ ನೀಡಿದರು. ಅವರು ತಮ್ಮ ತೀರ್ಪಿನಲ್ಲಿ ಹಂಗ್ಲೂರು ಗ್ರಾಮ ಪಂಚಾೈತ್ ಈ ವಿಷಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಂಡು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

ಪಂಚಾೈತ್ ತೀರ್ಮಾನ

ಗಡ್ಡ ಬೋಳಿಸಲು ನೀವು ಕ್ಷೌರಿಕನನ್ನು ಕೇಳಿದಾಗ ಆತ “ತಲೆ ಬೋಳಿಸಿಕೊಂಡರೆ ಮಾತ್ರ ನಾನು ನಿಮ್ಮ ಗಡ್ಡ ಬೋಳಿಸುವುದು” ಎನ್ನುವ ಶರತ್ತು ವಿಧಿಸಿದರೆ ಏನು ಮಾಡುತ್ತೀರಿ? ಚಿಮಿಣಿ ಎಣ್ಣೆ ಬೇಕಾದರೆ ಅಕ್ಕಿಯನ್ನು ಖರೀದಿಸಲೇಬೇಕು ಎನ್ನುವ ಶರತ್ತು ವಿಧಿಸಿ ಬಳಕೆದಾರನಿಗೆ ಹೊರೆಯಾಗಿದ್ದ ಮುಲ್ಕಿ ಸಹಕಾರಿ ಬ್ಯಾಂಕ್‍ನ ನ್ಯಾಯ ಬೆಲೆ ಅಂಗಡಿಯ ವಿರುದ್ಧ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಮಂಗಳೂರು ಇಲ್ಲಿನ ಉಪನಿರ್ದೇಶಕರು ಪತ್ರಿಕಾ ಪ್ರಕಟಣೆಯನ್ನೇ ನೀಡಬೇಕಾಯಿತು.

ಮೂಲ್ಕಿ ಸಹಕಾರಿ ಬ್ಯಾಂಕ್ ನ್ಯಾಯ ಬೆಲೆ ಅಂಗಡಿಯು ಪಡಿತರ ಚೀಟಿದಾರರ ಮೇಲೆ ಹೇರುತ್ತಿದ್ದ ಶರತ್ತು ವಿರುದ್ಧ ಸ್ಥಳೀಯರು ಬಸ್ರೂರು ಬಳಕೆದಾರರ ವೇದಿಕೆಗೆ ತಮ್ಮ ಆತಂಕವನ್ನು ಹೀಗೆ ವಿವರಿಸಿದ್ದರು.

ದಯಾವತಿ, D/o. ಸುಶೀಲ,
ಕಮಲ ಸದನ, ಕಂಬಳ ಗ್ರಾಮ, ಮುಲ್ಕಿ - ಇವರಿಂದ

ಬಳಕೆದಾರರ ವೇದಿಕೆ, ಬಸ್ರೂರು- ಇವರಿಗೆ
ಮಾನ್ಯರೇ,
ಮೂಲ್ಕಿ ನಿವಾಸಿಗಳಾಗಿರುವ ನಮಗೆ ಪಡಿತರ ವ್ಯವಸ್ಥೆಯಲ್ಲಿ ಅಕ್ಕಿ, ಗೋಧಿ, ಚಿಮಣಿ ಎಣ್ಣೆ, ಸಕ್ಕರೆ ಇತ್ಯಾದಿ ಆಹಾರವಸ್ತುಗಳನ್ನು ಮೂಲ್ಕಿ ಸಹಕಾರಿ ಬ್ಯಾಂಕ್‍ನ ನ್ಯಾಯ ಬೆಲೆ ಅಂಗಡಿ ವಿತರಿಸುತ್ತಿದೆ. ಈ ನ್ಯಾಯ ಬೆಲೆ ಅಂಗಡಿಯಲ್ಲಿ
ವಿತರಿಸಲಾಗುತ್ತಿರುವ ಅಕ್ಕಿ, ಗೋಧಿ ಹಾಗೂ ಸಕ್ಕರೆಗಳು ತೀರಾ ಕೀಳು ಮಟ್ಟದಲ್ಲಿದ್ದು ಅವುಗಳನ್ನು ಸೇವಿಸುವವರು ತಮ್ಮ ಆರೋಗ್ಯವನ್ನು ಕಳೆದುಕೊಳ್ಳುವ ಅಪಾಯವಿದೆ.
ಈ ಕಳಪೆ ಸಾಮಗ್ರಿಗಳನ್ನು ನಾವು ಖರೀದಿಸಲು ನಿರಾಕರಿಸಿ ಚಿಮಿಣಿ ಎಣ್ಣೆ, ಸಕ್ಕರೆ (ಒಳ್ಳೆಯದಿರುವಾಗ) ಖರೀದಿಸಲು ಹೋದಾಗ ಅಕ್ಕಿ ಹಾಗೂ ಗೋಧಿ ಖರೀದಿಸಿದರೆ ಮಾತ್ರ ಚಿಮಿಣಿ ಎಣ್ಣೆ ನೀಡುವುದಾಗಿ “ನ್ಯಾಯ ಬೆಲೆ ಅಂಗಡಿಯವರು ಕಾನೂನು ವಿಧಿಸುತ್ತಾರೆ!
ಘನ ಸರಕಾರ ವಿತರಿಸುವ ಕಳಪೆ ಪಡಿತರವನ್ನು ಕಡ್ಡಾಯವಾಗಿ ಖರೀದಿಸಬೇಕಾಗಿರುವ ಪಾಪಿಗಳಾಗಿರುವ ಬಡ ಜನರಿಗೆ ನೀವಾದರೂ ನ್ಯಾಯವೊದಗಿಸಬಲ್ಲಿರಾ?

ಇತೀ, ದಯಾವತಿ ಹಾಗೂ ಇತರ ಮೂಲ್ಕಿ ನಿವಾಸಿಗಳು
10-9-2002

Pages