ಸಪ್ಟಂಬರ್ 8, 2022ರಂದು ನಿಧನರಾದ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್‌ರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸಪ್ಟಂಬರ್ 19, 2022ರಂದು ನಡೆದದ್ದನ್ನು ದಿನಪತ್ರಿಕೆಗಳು ವರದಿ ಮಾಡಿವೆ. ಅನೇಕ ದೇಶಗಳ ನಾಯಕರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಗಣ್ಯರು ಅದರಲ್ಲಿ ಭಾಗವಹಿಸಿದ್ದರಂತೆ. (96 ವರುಷ ವಯಸ್ಸಿನ ಎಲಿಜಬೆತ್ 70 ವರುಷ 214 ದಿನ ಬ್ರಿಟನ್ ರಾಣಿಯಾಗಿದ್ದರು.)

ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್‌ರ ಸಾವಿನ ನಂತರ, ಹಲವು ದೇಶಗಳು ಅದಕ್ಕಾಗಿ ಸಂತಾಪ ವ್ಯಕ್ತಪಡಿಸಿವೆ. ಇದು ಆ ದೇಶಗಳ ದೊಡ್ಡತನ. ಯಾಕೆಂದರೆ, ಬ್ರಿಟಿಷ್ ಸಾಮ್ರಾಜ್ಯವು ಜಗತ್ತಿನ ಹಲವು ದೇಶಗಳನ್ನು ಶತಮಾನಕ್ಕಿಂತ ಅಧಿಕ ಕಾಲ ಆಳುತ್ತಾ, ಅಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಾ, ಅಲ್ಲಿನ ಪ್ರಜೆಗಳನ್ನು ಗುಲಾಮರಂತೆ ನಡೆಸಿಕೊಂಡಿತ್ತು.   

ಆ ವಸಾಹತುಶಾಹಿ ಸಾಮ್ರಾಜ್ಯ ಮಾಡಿದ ಅನ್ಯಾಯಗಳು ಒಂದೇ ಎರಡೇ?
ಬ್ರಿಟನ್ ಎಂಬ ವಸಾಹತುಶಾಹಿ ಸಾಮ್ರಾಜ್ಯ ಮಾಡಿದ ಅನ್ಯಾಯಗಳ ಪಟ್ಟಿ ದೀರ್ಘವಾಗಿದೆ. ಉದಾಹರಣೆಗೆ:
-ಆಕ್ರಮಿಸಿಕೊಂಡ ದೇಶಗಳ ಸ್ವಾತಂತ್ರ್ಯ ಹೋರಾಟಗಳನ್ನು ಅತ್ಯಂತ ಕ್ರೂರವಾಗಿ ದಮನ ಮಾಡಿದ್ದು
-ಸಮೃದ್ಧಿಯ ಪಥದಲ್ಲಿ ಸಾಗಬೇಕಾಗಿದ್ದ ಆ ಎಲ್ಲ ದೇಶಗಳನ್ನು, ವ್ಯವಸ್ಥಿತವಾಗಿ ಲೂಟಿ ಮಾಡಿದ್ದು

ಕೇರಳದ ಹಿನ್ನೀರಿನಲ್ಲಿ ಮತ್ತೆ ಹಾವುದೋಣಿಗಳ ನಾವಿಕರ ಹುಟ್ಟುಗಳ ಕಲರವ, "ವಂಚಿಪಟ್ಟು" ಹಾಡುಗಳ ಲಯಬದ್ಧ ಸದ್ದು ಕೇಳಿ ಬರುತ್ತಿದೆ. ಎರಡು ವರುಷಗಳಿಂದ ಕೊರೋನಾ ವೈರಸಿನ ದಾಳಿಯಿಂದಾಗಿ ಸ್ತಬ್ಧವಾಗಿದ್ದ ಹಾವುದೋಣಿ ಸ್ಪರ್ಧೆಗಳು ನವೋಲ್ಲಾಸದಿಂದ ಪುನಃ ಶುರುವಾಗಲಿವೆ.

ಸಪ್ಟಂಬರ್ 4ರಂದು ಅಳಪುಜ ಜಿಲ್ಲೆಯ ಪುನ್ನಮದ ಸರೋವರದ ನೆಹರೂ ಟ್ರೋಫಿ ಸ್ಪರ್ಧೆಯಿಂದ ತೊಡಗಿ, ನವಂಬರ್ 1ರಂದು ಅಷ್ಟಮುಡಿ ಸರೋವರದ ಸ್ಪರ್ಧೆಯ ವರೆಗೆ ಜನಪ್ರಿಯ ಹನ್ನೆರಡು ಹಾವುದೋಣಿ ಸ್ಪರ್ಧೆಗಳು ಜರಗಲಿವೆ. ಕಳೆದೆರಡು ವರುಷಗಳಲ್ಲಿ ಕೋವಿಡ್-19 ವೈರಸ್ ನಿಯಂತ್ರಣದ ನಿರ್ಬಂಧಗಳಿಂದಾಗಿ, ದೇಶದ ಮತ್ತು ವಿದೇಶಗಳ ಪ್ರವಾಸಿಗಳು ಈ ಸ್ಪರ್ಧೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಬಂದಿರಲಿಲ್ಲ.

ಹಾವುದೋಣಿಗಳದ್ದು ಶತಮಾನಗಳ ಇತಿಹಾಸ. 13ನೇ ಶತಮಾನದಲ್ಲಿ ಆಗಿನ ರಾಜಮನೆತನಗಳ “ಚುಂದನ್ ವಲ್ಲಮ್” (ಸಮರ ದೋಣಿ)ಗಳಾಗಿ ಇವುಗಳ ಬಳಕೆ. 1950ರಿಂದೀಚೆಗೆ ಇವುಗಳ ಸ್ಪರ್ಧೆ ಕೇರಳದ ಪ್ರಮುಖ ಕ್ರೀಡಾ ಸ್ಪರ್ಧೆಯಾಗಿ ಜಗತ್ಪ್ರಸಿದ್ಧವಾಗಿದೆ.

ವಿಜೇತರಿಗೆ ಕೋಟಿಗಟ್ಟಲೆ ಬಹುಮಾನದ ಮೊತ್ತ

ದನಗಳ ಗಡ್ಡೆಚರ್ಮ ರೋಗ
ಇನ್ನೊಂದು ಆತಂಕಕಾರಿ ವಿದ್ಯಮಾನ: ದನಗಳ ಗಡ್ಡೆಚರ್ಮ ರೋಗ (ಲಂಪಿ ಸ್ಕಿನ್ ಡಿಸೀಸ್). “ಈಗಾಗಲೇ 57,000 ದನಗಳು ಗಡ್ಡೆಚರ್ಮ ರೋಗದಿಂದ ಸತ್ತಿರುವ ಕಾರಣ ದನಗಳಿಗೆ ಲಸಿಕೆ ಹಾಕುವ ಕಾರ್ಯ ಚುರುಕಾಗಿಸಬೇಕು” ಎಂದು ಕೇಂದ್ರ ಸರಕಾರವು ಇತ್ತೀಚೆಗೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

ಯಾಕೆಂದರೆ, ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಈ ಅಪಾಯಕಾರಿ ರೋಗ ದನಗಳಲ್ಲಿ ವೇಗವಾಗಿ ಹರಡುತ್ತಿದೆ. ಸೊಳ್ಳೆ, ನೊಣ, ಹೇನು ಮತ್ತು ಕಣಜದ ಹುಳಗಳ ಮೂಲಕ ನೇರ ಸಂಪರ್ಕದಿಂದ ಹಾಗೂ ಸೋಂಕು ತಗಲಿದ ಆಹಾರ ಮತ್ತು ನೀರಿನ ಮೂಲಕ ಈ ರೋಗ ಪಸರಿಸುತ್ತಿದೆ.

ಈಗಾಗಲೇ ಸತ್ತಿರುವ ದನಗಳಲ್ಲಿ ರಾಜಸ್ಥಾನ ರಾಜ್ಯವೊಂದರಲ್ಲೇ ಸಾವಿಗೀಡಾದ ದನಗಳ ಸಂಖ್ಯೆ 37,000. ಇದನ್ನು ನಿಯಂತ್ರಿಸದಿದ್ದರೆ, ದೇಶದಲ್ಲಿ ಹಾಲಿನ ಕೊರತೆ ಉಂಟಾಗುವ ಅಪಾಯವಿದೆ. ಯಾಕೆಂದರೆ, ದೇಶದ ಒಟ್ಟು ಹಾಲಿನ ಉತ್ಪಾದನೆಯಲ್ಲಿ ಶೇಕಡಾ 18ರಷ್ಟು ಉತ್ತರಪ್ರದೇಶದ ಕೊಡುಗೆ. ಅಲ್ಲಿ ರೋಗ ನಿಯಂತ್ರಣ ಆಗದಿದ್ದರೆ, ಹಾಲಿನ ಉತ್ಪಾದನೆ ಕುಸಿಯುವುದು ಖಂಡಿತ.

ಮತ್ತೆಮತ್ತೆ ಪ್ರಕೃತಿಯ ಎಚ್ಚರಿಕೆ

ಒರಿಸ್ಸಾದ ಚಂದ್ರದೀಪುರ್ ಪಂಚಾಯತ್‌ನ ಬ್ರಾಹ್ಮಣ್‌ಸಾಹಿ ಗ್ರಾಮದಲ್ಲಿ ಇತ್ತೀಚೆಗೆ ನೆರೆಬಂದು ಇಳಿಯುತ್ತಿದ್ದಂತೆ, ಲಕ್ಷಗಟ್ಟಲೆ ವಿಷಕಾರಿ ಕೆಂಪಿರುವೆಗಳು ದಾಳಿ ಮಾಡಿವೆ. ಅಲ್ಲಿನ ಮನೆಗಳಲ್ಲಿ, ರಸ್ತೆಗಳಲ್ಲಿ, ಮರಗಳಲ್ಲಿ, ಹೊಲಗಳಲ್ಲಿ ಎಲ್ಲಿ ಕಂಡರಲ್ಲಿ ವಿಷಕಾರಿ ಕೆಂಪಿರುವೆಗಳೇ ತುಂಬಿವೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.

ಅವು ಕಚ್ಚಿದರೆ ಚರ್ಮ ಬಾತು ತುರಿಕೆ, ಉರಿ. ಇದನ್ನು ಸಹಿಸಲಾಗದೆ, ೧೦೦ ಮನೆಗಳಿರುವ ಆ ಹಳ್ಳಿಯಲ್ಲಿ ಹಲವರು ಈಗಾಗಲೇ ಮನೆ ತೊರೆದಿದ್ದಾರೆ. ಪಕ್ಕದ ಹಳ್ಳಿಗಳ ಬಂಧುಗಳ ಮನೆಗೆ ಹೋಗಿ ವಾಸ ಮಾಡತೊಡಗಿದ್ದಾರೆ.

ಹಳ್ಳಿಗರು ಸಾಕಿದ ಬೆಕ್ಕುನಾಯಿಗಳನ್ನು, ಮನೆಗಳಲ್ಲಿರುವ ಹಲ್ಲಿಗಳನ್ನು ಕೂಡ ಕೆಂಪಿರುವೆಗಳು ಬಿಟ್ಟಿಲ್ಲ. ಅಲ್ಲಿನ ಪರಿಸ್ಥಿತಿ ಹೇಗಿದೆ ಎಂದರೆ, ಹಳ್ಳಿಗರು ತಾವು ಕುಳಿತುಕೊಳ್ಳುವಾಗ, ಮಲಗುವಾಗ ಕೀಟನಾಶಕ ಪುಡಿಯಿಂದ ವೃತ್ತ ಬಿಡಿಸಿ, ಅದರೊಳಗೆ ಇರಬೇಕಾಗಿದೆ.

ತನ್ನ ಜೀವಮಾನದಲ್ಲೇ ಇಂತಹ ಇರುವೆ ದಾಳಿ ಕಂಡಿಲ್ಲ ಎನ್ನುತ್ತಾರೆ ಆ ಹಳ್ಳಿಯ ಲೋಕನಾಥ ಡ್ಯಾಶ್. “ಕೆಂಪಿರುವೆಗಳಿಂದಾಗಿ ನಮ್ಮ ಬದುಕೇ ಹೈರಾಣಾಗಿದೆ. ನಾವು ಸರಿಯಾಗಿ ಕೂರುವಂತಿಲ್ಲ, ತಿನ್ನುವಂತಿಲ್ಲ, ಮಲಗುವಂತಿಲ್ಲ. ಮಕ್ಕಳು ಓದುವಂತಿಲ್ಲ" ಎನ್ನುತ್ತಾರೆ ರೇಣುಬಾಲಾ ಡ್ಯಾಶ್. ಅವರೀಗ ಇರುವೆಗಳ ಕಾಟದಿಂದ ಪಾರಾಗಲಿಕ್ಕಾಗಿ ತನ್ನ ಬಂಧುವಿನ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ.  

ಬಾಲ್ಯದಲ್ಲಿ ಮಂಗಳೂರಿನ ಬೋಳೂರಿನಲ್ಲಿ ಬೆಳೆದವನು ನಾನು. ಮನೆಯಿಂದ ಬೊಕ್ಕಪಟ್ಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದಾಗ ನೇತ್ರಾವತಿ ನದಿ ದಡದ ಉದ್ದಕ್ಕೂ ಹಲವು ಹಂಚಿನ ಕಾರ್ಖಾನೆಗಳು.

ದಕ್ಷಿಣ ಕನ್ನಡ ಜಿಲ್ಲೆಯ ಕೇಂದ್ರವಾಗಿದ್ದ ಮಂಗಳೂರನ್ನು ಹಂಚಿನ ಕಾರ್ಖಾನೆಗಳಿಲ್ಲದೆ ಕಲ್ಪಿಸುವುದೇ ಅಸಾಧ್ಯವಾಗಿತ್ತು. ಸಾವಿರಾರು ಜನರಿಗೆ ಉದ್ಯೋಗ ಒದಗಿಸಿದ್ದ ಹಂಚಿನ ಕಾರ್ಖಾನೆಗಳು, ಜಿಲ್ಲೆಯ ಆರ್ಥಿಕತೆಗೂ ಊರುಗೋಲಾಗಿದ್ದವು.

ಪ್ರತಿಯೊಂದು ಹಂಚಿನ ಕಾರ್ಖಾನೆಯಲ್ಲಿಯೂ ಇಟ್ಟಿಗೆಯಿಂದ ಕಟ್ಟಲಾದ ಸುಮಾರು 100 ಅಡಿ ಎತ್ತರದ ಒಂದು “ಚಿಮಿಣಿ” ಇರುತ್ತಿತ್ತು. ಹಸಿ ಆವೆ ಮಣ್ಣಿನಿಂದ ಮಾಡಿದ ಹಂಚು, ಇಟ್ಟಿಗೆ ಇತ್ಯಾದಿಗಳನ್ನು ಕಟ್ಟಿಗೆಯಿಂದ ಸುಡುವಾಗ, ಆ ಚಿಮಿಣಿಯ ಮೂಲಕ ಹೊಗೆ ಆಕಾಶಕ್ಕೆ ಏರಿ ಹೋಗುತ್ತಿತ್ತು.

ಈಗ ಉತ್ತರದ ಬೈಂದೂರಿನಿಂದ ದಕ್ಷಿಣದ ಮಲಬಾರಿನ ವರೆಗೆ ದಿಗಂತವನ್ನು ಗಮನಿಸುತ್ತಾ ರಸ್ತೆಯಲ್ಲಿ ಸಾಗಿದರೆ ಕೆಲವೇ ಕೆಲವು ಚಿಮಿಣಿಗಳು ಕಾಣಿಸುತ್ತವೆ. ಉಳಿದ ಚಿಮಿಣಿಗಳು ಏನಾದವು? ಕೆಲವು ಕುಸಿಯುತ್ತಿವೆ, ಇನ್ನು ಕೆಲವು ಕುಸಿದು ಮಣ್ಣಾಗಿ ಹೋಗಿವೆ.

ನಿರ್ಮಾ ಡಿಟರ್ಜಂಟ್ ಬ್ರಾಂಡ್
ಭಾರತದಲ್ಲಿ 1980ರ ವರೆಗೆ ಹಳೆಯ ಬ್ರಾಂಡ್‌ಗಳ ಡಿಟರ್ಜಂಟುಗಳೇ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿದ್ದವು. ಆಗ, ಗುಜರಾತಿನ ಅಹ್ಮದಾಬಾದಿನ ಕರ್ಸನ್ ಭಾಯ್ ಪಟೇಲರ ಡಿಟರ್ಜಂಟ್ ಬ್ರಾಂಡ್ ನಿರ್ಮಾ ಮಾರುಕಟ್ಟೆ ಪ್ರವೇಶಿಸಿ, ನೆಲೆಯೂರಿದ್ದ ಬ್ರಾಂಡ್‌ಗಳನ್ನು ಸಮರ್ಥವಾಗಿ ಎದುರಿಸಿ, ಮಣಿಸಿತು.

ಇದು ಹೇಗಾಯಿತು? ಜಾಹೀರಾತಿಗೆ ಹಣ ಸುರಿಯಲು ಉತ್ಪಾದಕರು ಹಿಂಜರಿಯುತ್ತಿದ್ದ ಕಾಲಮಾನದಲ್ಲಿ, ಟಿವಿ ಜಾಹೀರಾತಿಗಾಗಿ ನಿರ್ಮಾ ಲಕ್ಷಗಟ್ಟಲೆ ಹಣ ಸುರಿಯಿತು. ನಿರ್ಮಾದ ಜಿಂಗಲ್ ಭಾರೀ ಜನಪ್ರಿಯವಾಯಿತು. ಮತ್ತೆಮತ್ತೆ ನಿರ್ಮಾ ಎಂಬ ಹೆಸರನ್ನು ಉಚ್ಚರಿಸುವ ಮೂಲಕ ಅದು ಕೇಳುಗರ ನೆನಪಿನಲ್ಲಿ ದಾಖಲಾಗುವಂತೆ ಮಾಡುವುದೇ ಆ ಜಿಂಗಲಿನ ತಂತ್ರ. ಅದು ಎಷ್ಟು ಪರಿಣಾಮಕಾರಿಯಾದ ತಂತ್ರವೆಂದರೆ, ನಿರ್ಮಾ ಜಿಂಗಲ್ ಆಗ ಕೇಳಿದವರಿಗೆ ಈಗಲೂ ಅದನ್ನು ಮರೆಯಲಾಗುತ್ತಿಲ್ಲ! ಕಳೆದ ದಶಕದಲ್ಲಿ, ಹೊಸ ತಲೆಮಾರಿನವರು ಆ ಜಿಂಗಲನ್ನು ರಿಮಿಕ್ಸ್ ಮಾಡಿ, ಅದಕ್ಕೆ ಮರುಜೀವ ನೀಡಿದ್ದಾರೆ. ಅಂತೂ ಆ ಕಾಲದ ದೃಶ್ಯ ಮಾಧ್ಯಮವನ್ನು ಮಾರಾಟ ಹೆಚ್ಚಿಸಲು ಸಮರ್ಥವಾಗಿ ಬಳಸಿಕೊಂಡಿತು ನಿರ್ಮಾ.
ಜೊತೆಗೆ, ಗುಣಮಟ್ಟದಲ್ಲಿ ನಿರ್ಮಾ ರಾಜಿ ಮಾಡಿಕೊಳ್ಳಲಿಲ್ಲ. ಉತ್ತಮ ಡಿಟರ್ಜಂಟನ್ನು ಬಹಳ ಕಡಿಮೆ ಬೆಲೆಗೆ ಗ್ರಾಹಕರಿಗೆ ಒದಗಿಸಿತು. ಮಾತ್ರವಲ್ಲ, ಸುವ್ಯವಸ್ಥಿತ ಜಾಲದ ಮೂಲಕ ಡಿಟರ್ಜೆಂಟಿನ ವಿತರಣೆ ಮಾಡಿತು. ಈ ರೀತಿಯಲ್ಲಿ,  

ಸ್ವತಂತ್ರ ಭಾರತದಲ್ಲಿವೆ ಹಲವಾರು ಜಗದ್ವಿಖ್ಯಾತ ಬ್ರಾಂಡ್‌ಗಳು. ಅವುಗಳಲ್ಲಿ ಹಲವು ಬ್ರಾಂಡ್‌ಗಳು ಮನೆಮಾತಾಗಿವೆ. ಕೆಲವು ಬ್ರಾಂಡ್‌ಗಳ ಉತ್ಪನ್ನಗಳು ಜಾಹೀರಾತಿನ ವಿನ್ಯಾಸದಿಂದಾಗಿ ಅಥವಾ ಜಿಂಗಲ್‌ನಿಂದಾಗಿ ಅಥವಾ ಅಪೂರ್ವ ಘೋಷಣೆಯಿಂದಾಗಿ ಅಥವಾ ರುಚಿಯಿಂದಾಗಿ ಜನಮನ ಗೆದ್ದಿವೆ. ದಶಕಗಳು ದಾಟಿದರೂ ಜನರು ಆ ಬ್ರಾಂಡ್‌ಗಳನ್ನು ಮರೆಯೋದಿಲ್ಲ. ಮತ್ತೆಮತ್ತೆ ಅದೇ ಬ್ರಾಂಡಿನ ಉತ್ಪನ್ನಗಳನ್ನು ಖರೀದಿಸುತ್ತಾರೆ.

ಅಂತಹ ಐದು ಬ್ರಾಂಡ್‌ಗಳು: ಅಮುಲ್ ಹಾಲಿನ ಉದ್ಯಮ, ಪಾರ್ಲೆ-ಜಿ ಬಿಸ್ಕಿಟ್, ಮಾರುತಿ ಕಾರು, ನಿರ್ಮಾ ಡಿಟರ್ಜಂಟ್ ಮತ್ತು ಜಿಯೋ ಟೆಲಿಕಾಮ್. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಮಾರುಕಟ್ಟೆಯಲ್ಲಿ ಈಗಲೂ ವಿಜೃಂಭಿಸುತ್ತಿರುವ ಈ ಬ್ರಾಂಡ್‌ಗಳ ಬಗ್ಗೆ ಒಂದು ಕಿರುನೋಟ ಇಲ್ಲಿದೆ.

ಅಮುಲ್
ಅಮುಲ್ ಹಾಲಿನ ಉತ್ಪನ್ನಗಳು ಭಾರತದ ಎಲ್ಲೆಡೆಗಳಲ್ಲಿ ಲಭ್ಯ. ಡೈರಿ ರಂಗದ ಮುಂಚೂಣಿಯಲ್ಲಿರುವ ಅಮುಲ್, ಭಾರತದ ಪ್ರಮುಖ 10 ಎಫ್‌.ಎಮ್.ಸಿ.ಜಿ. (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಕಂಪೆನಿಗಳಲ್ಲೊಂದು. ಅಂದ ಹಾಗೆ ಅಮುಲ್ ವಿಸ್ತೃತ ರೂಪ: ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್.

"ಜೈ ಹಿಂದ್” ಅಥವಾ "ವಂದೇ ಮಾತರಂ” ಎಂದು ಜನಸಂದಣಿಯಲ್ಲಿ ಯಾರು ಕೂಗಿದರೂ ಉಳಿದವರೆಲ್ಲರೂ ಈಗಲೂ ಉತ್ಸಾಹದಿಂದ ದನಿಗೂಡಿಸುತ್ತಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಹಚ್ಚಿದ ಇಂತಹ ಘೋಷಣೆಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊತ್ತಿನಲ್ಲಿ ನೆನೆಯೋಣ.

1)ನೇತಾಜಿ ಸುಭಾಷ್ ಚಂದ್ರ ಬೋಸರ "ಜೈ ಹಿಂದ್”
ನೇತಾಜಿ ಸುಭಾಷ್ ಚಂದ್ರ ಬೋಸರು ಭಾರತಕ್ಕೆ ಸ್ವಾತಂತ್ರ್ಯ ಗಳಿಸಲಿಕ್ಕಾಗಿ “ಭಾರತೀಯ ರಾಷ್ಟ್ರೀಯ ಸೈನ್ಯ" (ಐ.ಎನ್.ಎ.) ಸಂಘಟಿಸಿದ್ದು ಚಾರಿತ್ರಿಕ ಬೆಳವಣಿಗೆ. ಎರಡನೇ ಮಹಾಯುದ್ಧದಲ್ಲಿ, ಜಪಾನ್ ಸೈನ್ಯದ ಜೊತೆ ಸೇರಿ ಈ ಸೈನ್ಯವು ಭಾರತವನ್ನು ಲೂಟಿ ಮಾಡುತ್ತಿದ್ದ ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ್ದು ಬ್ರಿಟಿಷರಲ್ಲಿ ನಡುಕ ಹುಟ್ಟಿಸಿತ್ತು. ಐಎನ್‌ಎ ಸೈನಿಕರಿಗೆ ಗೌರವ ಸೂಚಿಸಲಿಕ್ಕಾಗಿ ಸುಭಾಷ್ ಚಂದ್ರ ಬೋಸರು ಈ ಘೋಷಣೆಯನ್ನು ಜನಪ್ರಿಯಗೊಳಿಸಿದರು.

ಇದರ ಮೂಲ ಅದಾಗಲೇ ಭಾರತೀಯರಲ್ಲಿ ಜನಪ್ರಿಯವಾಗಿದ್ದ "ಜೈ ರಾಮ್‌ಜಿ” ಎಂಬ ಘೋಷಣೆ ಎನ್ನುವುದಕ್ಕೆ ಆಧಾರಗಳಿವೆ. ಆದರೆ, ಐಎನ್‌ಎಯಲ್ಲಿ ಭಾರತದ ಎಲ್ಲೆಡೆಯ ಸೈನಿಕರಿದ್ದ ಕಾರಣ, ಸೈನ್ಯದ ಘೋಷಣೆಯನ್ನು ಯಾವುದೇ ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂಬುದು ನೇತಾಜಿಯವರ ಇರಾದೆಯಾಗಿತ್ತು.

2)ಬಂಕಿಂ ಚಂದ್ರ ಚಟರ್ಜಿ ಅವರ "ವಂದೇ ಮಾತರಂ”

ಆಗಸ್ಟ್ 15, 2022ರಂದು ಭಾರತ ದೇಶದ ಉದ್ದಗಲದಲ್ಲಿ  “ಮನೆಮನೆಯಲ್ಲಿ ರಾಷ್ಟ್ರಧ್ವಜಾರೋಹಣ” ಮೂಲಕ ಸ್ವಾತಂತ್ರ್ಯ ಗಳಿಸಿ 75 ವರುಷ ಪೂರೈಸಿದ್ದನ್ನು ಸಂಭ್ರಮಿಸಲಾಯಿತು.

ಇದು ಅಂಚೆ ವಿತರಣೆಗಾಗಿ ರೂಪಿಸಿದ “ಪಿನ್ ಕೋಡ್”ಗೆ 50 ವರುಷ ತುಂಬಿದ ಸಂದರ್ಭವೂ ಹೌದು. ಯಾಕೆಂದರೆ, ಪಿನ್ ಕೋಡ್ (ಪೋಸ್ಟಲ್ ಇಂಡೆಕ್ಸ್ ನಂಬರ್) ಜ್ಯಾರಿಗೊಳಿಸಿದ್ದು 15 ಆಗಸ್ಟ್ 1972ರಂದು.

ಭಾರತ ದೇಶ 15 ಆಗಸ್ಟ್ 1947ರಂದು ಸ್ವಾತಂತ್ರ್ಯ ಗಳಿಸಿದಾಗ, ಇಲ್ಲಿ ಇದ್ದ ಅಂಚೆ ಕಚೇರಿಗಳ ಸಂಖ್ಯೆ 23,344. ಅನಂತರ ವಿವಿಧ ರಂಗಗಳಲ್ಲಿ ನಮ್ಮ ದೇಶ ಸಾಧಿಸಿದ ಅಭಿವೃದ್ಧಿ ಅಭೂತಪೂರ್ವ. ಕೋಟಿಗಟ್ಟಲೆ ಜನರಿರುವ ಇಂತಹ ವಿಶಾಲ ದೇಶದಲ್ಲಿ ಅಂಚೆಯನ್ನು ಸುಲಭವಾಗಿ ವಿಂಗಡಿಸಲು ಮತ್ತು ತಲಪಿಸಲಿಕ್ಕಾಗಿ “ಪಿನ್ ಕೋಡ್” ರೂಪಿಸಲಾಯಿತು. ಯಾಕೆಂದರೆ, ನಮ್ಮ ದೇಶದಲ್ಲಿ ಒಂದೇ ಹೆಸರು ಹೊಂದಿರುವ ಹಲವಾರು ಸ್ಥಳಗಳಿವೆ. ಉದಾಹರಣೆಗೆ, ಕರ್ನಾಟಕದ ಮಂಗಳೂರು ತಾಲೂಕಿನಲ್ಲಿ ಗುರುಪುರವಿದೆ (ಪಿನ್ ಕೋಡ್ 574145); ಹಾಗೆಯೇ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿಯೂ ಗುರುಪುರವಿದೆ (ಪಿನ್ ಕೋಡ್ 571105). ಅದಲ್ಲದೆ, ಒಂದೇ ಊರಿನ ಹೆಸರನ್ನು ಬೇರೆಬೇರೆ ಅಕ್ಷರಘಟಿತದಲ್ಲಿ (Spelling) ಬರೆಯಲಾಗುತ್ತದೆ. ಉದಾಹರಣೆಗೆ, ಕನ್ನಡದ ಮುತ್ತೂರು ಮತ್ತು ಅಡ್ಡೂರು. ಇದರಿಂದಾಗಿ, ಅಂಚೆ ವಿತರಣೆ ಮತ್ತು ಬಟವಾಡೆಯಲ್ಲಿ ಬಹಳ ಸಮಸ್ಯೆಗಳು ಉಂಟಾಗುತ್ತಿದ್ದವು.

“ಸಾವಿರಾರು ವರುಷಗಳ ಪರಂಪರೆ ಇರುವ ನಮ್ಮ ದೇಶದ ಬಗ್ಗೆ ನಾವು ಅಭಿಮಾನ ಪಡಬಹುದಾದ ಸಂಗತಿಗಳು ಸಾವಿರಾರು. ಉದಾಹರಣೆಗೆ, ಭಾರತೀಯ ಸಮಾಜದಲ್ಲಿ ಇದ್ದಂತಹ ಮೌಲ್ಯಶಿಕ್ಷಣದ ವ್ಯವಸ್ಥೆ.  “ಸತ್ಯವನ್ನೇ ಹೇಳು, ಸುಳ್ಳು ಹೇಳಬೇಡ” ಎಂದು ಕಿರಿಯರಿಗೆ ಹಿರಿಯರು ಮತ್ತೆಮತ್ತೆ ಹೇಳುತ್ತಿದ್ದರು. ಸುಳ್ಳು ಹೇಳಿದರೆ ಏನಾಗುತ್ತದೆ ಎಂಬುದನ್ನು ಸತ್ಯ ಘಟನೆಗಳ ಮತ್ತು ಕತೆಗಳ ಮೂಲಕ ಮಕ್ಕಳ ಮನಸ್ಸಿಗೆ ನಾಟುವಂತೆ ವಿವರಿಸುತ್ತಿದ್ದರು. ಬಾಲ್ಯದಲ್ಲೇ ಕಲಿತ ಇಂತಹ ಸಂಗತಿಗಳು ಮಕ್ಕಳ ಮನಸ್ಸಿನಲ್ಲಿ ಗಾಡವಾಗಿ ಅಚ್ಚೊತ್ತಿ, ಅವರು ಬೆಳೆದು ದೊಡ್ಡವರಾದಾಗ ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುತ್ತಿದ್ದವು. ಇವತ್ತು ಅಂತಹ ವ್ಯವಸ್ಥೆಯೇ ಇಲ್ಲವಾಗಿದೆ. ನಾವು ಈಗ ಸಮಾಜದಲ್ಲಿ ಕಾಣುತ್ತಿರುವ ಹಲವು ಅನಿಷ್ಠಗಳಿಗೆ ಇದುವೇ ಕಾರಣ” ಎಂದು ಡಾ. ರಾಘವೇಂದ್ರ ಹೊಳ್ಳ, ಚೇರ್ಮನ್, ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಅವರು "ನಮ್ಮ ಹೆಮ್ಮೆಯ ಭಾರತ” ಪುಸ್ತಕವನ್ನು ಲೋಕಾರ್ಪಣೆ ಮಾಡಿದ ನಂತರ ಮಾತನಾಡುತ್ತಾ ಹೇಳಿದರು.

Pages