Agriculture and Rural Development

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ರೈತ ರಾಜು ಸ್ವಾಮಿ ತನ್ನ ನಾಲ್ಕು ಹೆಕ್ಟೇರ್ ಅಡಿಕೆ ತೋಟದಲ್ಲಿ ೧೨ ಕೊಳವೆಬಾವಿ ಕೊರೆಸಿದ್ದಾರೆ. ಒಂದರಲ್ಲೂ ನೀರು ಸಿಕ್ಕಿಲ್ಲ!
ಈಗ, ೨೦೧೯ರ ಬೇಸಗೆಯಲ್ಲಿ,  ತನ್ನ ಅಡಿಕೆ ಸಸಿಗಳನ್ನು ಉಳಿಸಲಿಕ್ಕಾಗಿ ಟ್ಯಾಂಕರಿನಲ್ಲಿ ನೀರು ತಂದು ಹಾಕುತ್ತಿದ್ದಾರೆ, ೧೭ ಕಿಮೀ ದೂರದ ಭದ್ರಾ ಕಾಲುವೆಯಿಂದ. ೨೪,೦೦೦ ಲೀಟರ್ ನೀರು ತರುವ ಟ್ಯಾಂಕರಿನ ಒಂದು ಟ್ರಿಪ್ಪಿಗೆ ಅವರು ಪಾವತಿಸುವ ಹಣ ರೂ.೨,೦೦೦. ಪ್ರತಿಯೊಂದು ಹೆಕ್ಟೇರ್ ಅಡಿಕೆ ತೋಟಕ್ಕೆ ವಾರಕ್ಕೆ ಹಾಕಬೇಕಾದ ನೀರು ಕನಿಷ್ಠ ಒಂದು ಲಕ್ಷ ಲೀಟರ್ ಎಂಬುದವರ ಲೆಕ್ಕಾಚಾರ. ೨೦೧೯ರ ಜನವರಿ ಮೂರನೇ ವಾರದಿಂದ ಮೇ ಮಧ್ಯದ ತನಕ ಟ್ಯಾಂಕರಿನಲ್ಲಿ ತೋಟಕ್ಕೆ ನೀರು ತರಿಸಲಿಕ್ಕಾಗಿ ಅವರು ಮಾಡಿರುವ ವೆಚ್ಚ ಬರೋಬ್ಬರಿ ೫.೫ ಲಕ್ಷ ರೂಪಾಯಿ!
ಹಲವು ರೈತರು ತಮ್ಮ ಅಡಿಕೆ ತೋಟ ಉಳಿಸಲಿಕ್ಕಾಗಿ ಹೀಗೆ ಟ್ಯಾಂಕರಿನಲ್ಲಿ ನೀರು ತರಿಸಿ, ಅಡಿಕೆ ಸಸಿಗಳಿಗೆ ಸುರಿಯುತ್ತಿದ್ದಾರೆ. ಹಾಗಾಗಿ, ಚನ್ನಗಿರಿ ತಾಲೂಕಿನ ಹಂಚಿನ ಸಿದ್ಧಾಪುರ, ನಲ್ಲೂರು ಮತ್ತು ಸಂತೆಬೆನ್ನೂರು ಗ್ರಾಮಗಳಲ್ಲಿ ಭದ್ರಾ ಕಾಲುವೆಯಿಂದ ೪೦ರಿಂದ ೫೦ ಟ್ಯಾಂಕರುಗಳು ನೀರು ಎತ್ತುತ್ತಿರುವುದನ್ನು ಯಾವಾಗಲೂ ಕಾಣಬಹುದು (ಇದು ಅಧಿಕಾರಿಗಳ ಸಮ್ಮತಿಯಿಲ್ಲದ ಚಟುವಟಿಕೆ ಎಂಬುದು ಬೇರೆಯೇ ಸಂಗತಿ). ಇದರಿಂದಾಗಿ ಆ ಪ್ರದೇಶಗಳಲ್ಲಿ ಆಗಾಗ ವಾಹನ ದಟ್ಟಣೆಯ ಸಮಸ್ಯೆ. ೪೦ರಿಂದ ೫೦ ಕಿಮೀ ದೂರದಿಂದ ಟ್ಯಾಂಕರಿನಲ್ಲಿ ನೀರು ತರಿಸುತ್ತಿರುವ ರೈತರೂ ಇದ್ದಾರೆ.
“ಮುಂದಿನ ವರುಷ ಅಡಿಕೆ ಮಾರಾಟ ಮಾಡಿದರೆ ಸಿಗುವ ಆದಾಯ, ಈ ವರುಷ ಟ್ಯಾಂಕರಿನಲ್ಲಿ ನೀರು ತರಿಸೋದಕ್ಕೆ ಮಾಡಿದ ವೆಚ್ಚಕ್ಕಿಂತ ಕಡಿಮೆ ಆಗಲಿದೆ. ಆದರೆ ಈಗ ನನಗೆ ಅಡಿಕೆ ಗಿಡಗಳನ್ನು ಉಳಿಸೋದೇ ಚಿಂತೆ. ಮುಂದಿನ ಮಳೆಗಾಲದಲ್ಲಾದರೂ ಒಳ್ಳೇ ಮಳೆಯಾದೀತೆಂದು ನಿರೀಕ್ಷೆ” ಎನ್ನುತ್ತಾರೆ ರಾಜು ಸ್ವಾಮಿ.
ದಾವಣಗೆರೆ ಜಿಲ್ಲೆಯಲ್ಲಿ ಅಂದೊಮ್ಮೆ ಲಾಭದಾಯಕ ಎನಿಸಿದ್ದ ಅಡಿಕೆ ಕೃಷಿ ಈಗ ಅಲ್ಲಿನ ರೈತರಿಗೆ ನಷ್ಟದ ಬಾಬತ್ತಾಗಿದೆ. ಇದಕ್ಕೆ ಮುಖ್ಯ ಕಾರಣ ಹಲವು ವರುಷಗಳ ಸತತ ಬರಗಾಲ ಮತ್ತು ಮುಂಗಾರಿನ ಮುಂಚಿನ ಮಳೆ ಕೈಕೊಟ್ಟಿರುವುದು.

ಬೇಸಗೆ ಮತ್ತು ಚಳಿಗಾಲಗಳಲ್ಲಿ ಮಹಾರಾಷ್ಟ್ರದ ಮೇಲ್‍ಘಾಟ್ ಹತ್ತಿರ ವಾಸ ಮಾಡುವ ಕೊರ್ಕು ಬುಡಕಟ್ಟಿನ ಜನರು ಬಲೆಯಿಂದ ಆವರಿಸಿದ ಹತ್ತಿ ಬಟ್ಟೆಯ ಉಡುಪು ಧರಿಸಿ ಕಾಡಿಗೆ ಹೊರಡುತ್ತಾರೆ.
ಅವರ ಉದ್ದೇಶ ಮರಗಳಿಂದ ಜೇನು ಸಂಗ್ರಹಿಸುವುದು. ಅದು ಸವಾಲಿನ ಕೆಲಸ. ಯಾಕೆಂದರೆ, ಜೇನ್ನೊಣಗಳನ್ನು ಕೊಲ್ಲದೆ, ಜೇನುಹುಟ್ಟುಗಳನ್ನು ನಾಶ ಮಾಡದೆ ಜೇನು ಸಂಗ್ರಹಿಸಬೇಕು. ಅದಕ್ಕಾಗಿ ಅವರು, ಜೇನ್ನೊಣಗಳ ಗೂಡಿನ ಹೃದಯದಂತಿರುವ ಜೇನು ತುಂಬಿದ ಹುಟ್ಟುಗಳಿಗೆ ಮಾತ್ರ ಕೈಹಾಕುತ್ತಾರೆ. “ಜೇನು ಗೂಡುಗಳ ಆ ಭಾಗದಲ್ಲಿ ಮಾತ್ರ ಜೇನು ಸಂಗ್ರಹಿಸಿಟ್ಟಿರುತ್ತವೆ. ಅಲ್ಲಿಂದ ಜೇನು ತೆಗೆಯಲಿಕ್ಕಾಗಿ ಇಡೀ ಜೇನುಗೂಡನ್ನೇ ನಾಶ ಮಾಡುವುದು ಅಗತ್ಯವಿಲ್ಲ” ಎನ್ನುತ್ತಾರೆ ಗಜಾನನ ಕಾಳೆ. ಅವರು ಕೊರ್ಕು ಬುಡಕಟ್ಟಿನ ಜನರೊಂದಿಗೆ ಕೆಲಸ ಮಾಡುತ್ತಾರೆ. ಈ ವಿಧಾನ ಅನುಸರಿಸಿದರೆ ಒಂದೇ ಜೇನುಗೂಡನ್ನು ಮೂರು ಬಾರಿ ಜೇನು ಸಂಗ್ರಹಕ್ಕಾಗಿ ಜೇನ್ನೊಣಗಳು ಬಳಸಲು ಸಹಾಯವಾಗುತ್ತದೆ.
ಈ ರೀತಿಯಲ್ಲಿ, ಕೆಲವು ಸಲ ಕಾಡಿನ ಉತ್ಪನ್ನಗಳನ್ನು ಸುಸ್ಥಿರ ವಿಧಾನದಲ್ಲಿ ಕೊಯ್ಲು ಮಾಡಲು ಸಾಧ್ಯ. ಆದರೆ ಕೆಲವು ಸಲ ಹಾಗೆ ಮಾಡಲಾಗುವುದಿಲ್ಲ. ಉದಾಹರಣೆಗೆ, ಔಷಧಿಗಾಗಿ ಯಾವುದೇ ಸಸ್ಯದ ಕಾಂಡದ ತೊಗಟೆ ಅಥವಾ ಬೇರು ಕಿತ್ತಾಗ ಆ ಸಸ್ಯ ನಾಶವಾಗುತ್ತದೆ.
ಹಲವಾರು ಔಷಧೀಯ ಹಾಗೂ ಸುಗಂಧ ಸಸ್ಯಭಾಗಗಳನ್ನು ಮತ್ತು ಅಪರೂಪದ ಕಾಡಿನ ಉತ್ಪನ್ನಗಳನ್ನು ಔಷಧಿ ಕಂಪೆನಿಗಳು ಬಳಸುತ್ತಿವೆ. ಆದರೆ ಆ ಕಂಪೆನಿಗಳು ಸುಸ್ಥಿರ ವಿಧಾನದಲ್ಲಿ ಕೊಯ್ಲು ಮಾಡುತ್ತಿಲ್ಲ ಮತ್ತು ಸ್ಥಳೀಯ ಸಮುದಾಯಗಳ ಜನರಿಗೆ ತಮ್ಮ ಲಾಭದಲ್ಲಿ ಪಾಲು ನೀಡುತ್ತಿಲ್ಲ. ಸ್ಥಳೀಯ ಸಮುದಾಯಗಳ ಜನರೇ ಇಂಥ ಜೈವಿಕ ಸಂಪನ್ಮೂಲಗಳಗಳ ನಿಜವಾದ ರಕ್ಷಕರು ಎಂಬುದು ಗಮನಾರ್ಹ.
ಈ ನಿಟ್ಟಿನಲ್ಲಿ ಉತ್ತರಖಂಡದ ಹೈಕೋರ್ಟ್ ಚಾರಿತ್ರಿಕ ತೀರ್ಪು ನೀಡಿ, ಜೈವಿಕ ಸಂಪನ್ಮೂಲಗಳ ಮೇಲೆ ಸ್ಥಳೀಯ ಜನಸಮುದಾಯಗಳ ಹಕ್ಕು ಸ್ಥಾಪನೆ ಮಾಡಿದೆ. ಈ ಸಂಪನ್ಮೂಲಗಳ ಮಾರಾಟದಿಂದ ಸಿಗುವ ಆದಾಯವನ್ನು ಸ್ಥಳೀಯ ಜನಸಮುದಾಯಗಳ ಜೊತೆ ಹಂಚಿಕೊಳ್ಳಬೇಕೆಂಬ ಆದೇಶದ ವಿರುದ್ಧ ಯೋಗ ಗುರು ಬಾಬಾ ರಾಮದೇವರ ದಿವ್ಯ ಫಾರ್ಮಸಿ ದಾಖಲಿಸಿದ್ದ ದಾವೆಯನ್ನು ಹೈಕೋರ್ಟ್ ರದ್ದು ಮಾಡಿದೆ.

ಆಟ, ಊಟ, ಪಾಠ, ಅಡುಗೆ, ನಡಿಗೆ, ನಡವಳಿಕೆ – ಇವೆಲ್ಲವನ್ನು ನಮಗೆ ಕಲಿಸುವವರು ಹೆತ್ತವರು, ಹಿರಿಯರು ಮತ್ತು ಗುರುಗಳು. ಆದರೆ ಒಂದು ಹಕ್ಕಿಗೆ ಗೂಡು ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇನ್ನೊಣಕ್ಕೆ ಎರಿಗಳಲ್ಲಿ ಷಟ್ಪದಿ ಕೋಶ ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇಡಕ್ಕೆ ಅದ್ಭುತ ಬಲೆ ನೇಯಲು ಯಾರು ಕಲಿಸುತ್ತಾರೆ?
ಅವೆಲ್ಲ ಪ್ರಕೃತಿಯ ವಿಸ್ಮಯ. ಮಾನವನ ಹಲವು ಆವಿಷ್ಕಾರಗಳಿಗೆ ಪ್ರಕೃತಿಯೇ ಸ್ಫೂರ್ತಿ ಎಂದರೆ ನಂಬುವಿರಾ?
ಚಿನ್ನದ ಅನುಪಾತ: ಈ ಹೆಸರಿನ ಸಂಖ್ಯಾಸರಣಿ ಪ್ರಕೃತಿಯ ವಿಸ್ಮಯಗಳಲ್ಲೊಂದು. ಅದು ಹೀಗಿದೆ: ೦,೧, ೧, ೨, ೩, ೫, ೮, ೧೩…. ಅಂದರೆ ಸರಣಿಯ ಪ್ರತಿಯೊಂದು ಸಂಖ್ಯೆಯೂ ಹಿಂದಿನ ಎರಡು ಸಂಖ್ಯೆಗಳ ಮೊತ್ತ. ಪ್ರಕೃತಿಯಲ್ಲಿ ಈ ಅನುಪಾತದಲ್ಲಿರುವ ಹಲವು ರಚನೆಗಳಿವೆ. ಹಲವು ಸಸ್ಯಗಳ ಎಲೆಗಳು ಇದೇ ಅನುಪಾತದಲ್ಲಿವೆ. ಇದರಿಂದಾಗಿ ಪ್ರತಿಯೊಂದು ಎಲೆಗೂ ಸಾಕಷ್ಟು ಸೂರ್ಯ ಪ್ರಕಾಶ ಸಿಗುತ್ತದೆ. ಕೆಲವು ಸಮುದ್ರ ಚಿಪ್ಪುಗಳ ರಚನೆ ಇದೇ ಅನುಪಾತದಲ್ಲಿದೆ. ಅವನ್ನು ಅನುಸರಿಸಿ, ವೃತ್ತಾಕಾರವಾಗಿ ಸುತ್ತಿಸುತ್ತಿ ಮೇಲೇರುವ ಮೆಟ್ಟಲುಗಳನ್ನು ಕೆಲವು ಕಟ್ಟಡಗಳಲ್ಲಿ ನಿರ್ಮಿಸಲಾಗಿದೆ.
ವೆಲ್ ಕ್ರೋ ಅಂಟುಬಂಧ: ಬ್ಯಾಗುಗಳಲ್ಲಿ, ಚಪ್ಪಲಿ ಮತ್ತು ಬೂಟ್ಸುಗಳಲ್ಲಿ ಒತ್ತಿದೊಡನೆ ಬಿಗಿಯಾಗಿ ಅಂಟಿಕೊಳ್ಳುವ ಅಂಟುಬಂಧ (ವೆಲ್ ಕ್ರೋ)ಗಳನ್ನು ನೀವೆಲ್ಲರೂ ಕಂಡಿದ್ದೀರಿ. ಇದರ ಸಂಶೋಧಕ ಸ್ವಿಝರ್-ಲ್ಯಾಂಡಿನ ಇಲೆಕ್ಟ್ರಿಕಲ್ ಇಂಜಿನಿಯರ್ ಜೋರ್ಜ್ ಡಿ ಮೆಸ್-ಟ್ರಾಲ್. ಅವನ ಕೋಟು ಮತ್ತು ನಾಯಿಗೆ ಅಂಟಿಕೊಂಡಿದ್ದ ಬರ್-ಡೊಕ್ ಗಿಡದ ಕಾಯಿಗಳೇ ಈ ಆವಿಷ್ಕಾರಕ್ಕೆ ಸ್ಫೂರ್ತಿ. ಆ ಕಾಯಿಗಳನ್ನು ಆತ ಮನೆಗೊಯ್ದು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿದ. ಆಗ ಕಾಣಿಸಿದಂತಹ ಒಂದಕ್ಕೊಂದು ಬೆಸೆಯುವ ಕೊಕ್ಕೆ ಮತ್ತು ಕೊಂಡಿಗಳನ್ನು ರೂಪಿಸಿ ಅಂಟುಬಂಧ ಆವಿಷ್ಕರಿಸಿದ.

ಯಾವುದೇ ಬೆಳೆ ಬೆಳೆಸುವುದಿದ್ದರೂ ಸೆಗಣಿಯಿಂದ ತಯಾರಿಸಿದ ಗೊಬ್ಬರ ಅಥವಾ ಕಂಪೋಸ್ಟ್ ಅಗತ್ಯ. ಸಾವಯವ ಕೃಷಿಗಂತೂ ಸೆಗಣಿ ಗೊಬ್ಬರ ಬೇಕೇ ಬೇಕು.
ಆದರೆ, ಸೆಗಣಿ ಪ್ರಪಂಚ ಕೇವಲ ಗೊಬ್ಬರಕ್ಕೆ ಸೀಮಿತವಲ್ಲ. ಅದರ ಬಳಕೆಗಳು ಹಲವು. ಉದಾಹರಣೆಗೆ ಸೆಗಣಿಯಿಂದ ಕಾಗದ ತಯಾರಿ ಒಂದು ಉದ್ಯಮ. ಯಾವುದೇ ಸಸ್ಯದ ನಾರಿನಿಂದ ಕಾಗದ ತಯಾರಿಸಬಹುದು. ಹಾಗೆಯೇ ಸೆಗಣಿಯಿಂದಲೂ ಕಾಗದ ತಯಾರಿ ಸಾಧ್ಯ. ಆದರೆ ದೊಡ್ಡ ಪ್ರಮಾಣದಲ್ಲಿ ಸೆಗಣಿ ಸಂಗ್ರಹಿಸುವುದು ಕಷ್ಟಸಾಧ್ಯವಾದ ಕಾರಣ ಇದು ದೊಡ್ಡ ಉದ್ಯಮವಾಗಿ ಬೆಳೆದಿಲ್ಲ.
ಆನೆ ಲದ್ದಿಯ ಕಾಗದಕ್ಕೆ ಬಹಳ ಬೇಡಿಕೆ ಇದೆ. ಆನೆ ಜಗಿದು ನುಂಗುವ ಸಸ್ಯಜನ್ಯ ಆಹಾರ ಅದರ ದೊಡ್ಡ ಜೀರ್ಣಾಂಗವ್ಯೂಹ ಹಾದು ಲದ್ದಿಯಾಗಿ ಹೊರಬರುತ್ತದೆ. ಈ ಪ್ರಕ್ರಿಯೆಯಲ್ಲಿ, ಪೋಷಕಾಂಶಗಳನ್ನು ಸಣ್ಣ ಪ್ರಮಾಣದಲ್ಲಿ ಹೀರಿಕೊಳ್ಳುವುದರ ಹೊರತಾಗಿ, ಒಳಹೋದ ಆಹಾರ ಲದ್ದಿಯಾಗಿ ಹೊರಬರುವಾದ ಹೆಚ್ಚಿನ ಬದಲಾವಣೆ ಆಗಿರುವುದಿಲ್ಲ. ಆನೆಲದ್ದಿ ಕಾಗದದ ವಾಣಿಜ್ಯ ಯಶಸ್ಸು ದೊಡ್ಡ ಸುದ್ದಿಯಾಯಿತು. ಅದರಿಂದ ಪ್ರೇರಣೆ ಪಡೆದ ಹಲವರು ಈಗ ಕುದುರೆ, (ಅಮೆರಿಕದ) ಕಡವೆ, ಕತ್ತೆ, ದೊಡ್ಡ ಪಾಂಡಾಗಳ ಲದ್ದಿ ಮತ್ತು ಕಾಗೆಯ ಹಿಕ್ಕೆಯಿಂದಲೂ ಕಾಗದ ತಯಾರಿಸಿ ಮಾರಿ ಯಶಸ್ವಿಯಾಗಿದ್ದಾರೆ.
ಬ್ಲ್ಯಾಕ್ ಐವರಿ ಕಾಫಿ, ಸಿವೆಟ್ ಬೆಕ್ಕಿನ ಕಾಫಿ, ಕಂಬಳಿಹುಳದ ಚಹಾ
ಆನೆಯ ಜೀರ್ಣಾಂಗವ್ಯೂಹದ ಇತ್ತೀಚೆಗಿನ ಬಳಕೆ ಏನು ಗೊತ್ತೇ? ಕಾಫಿ ಬೀಜಗಳನ್ನು ಭಾಗಶಃ ಜೀರ್ಣ ಮಾಡಲು ಅದನ್ನು ಬಳಸುವುದು! ಆ ಕಾಫಿ ಬೀಜಗಳನ್ನು ಆನೆಯ ಸೆಗಣಿಯಿಂದ ಬೇರ್ಪಡಿಸಿ ಬಳಸಲಾಗುತ್ತದೆ. ಯಾಕಂತೀರಾ? “ಬ್ಲ್ಯಾಕ್ ಐವರಿ” ಎಂಬ ವಾಣಿಜ್ಯ ಹೆಸರಿನ ಕಾಫಿ ತಯಾರಿಸಲಿಕ್ಕಾಗಿ! ಅಥವಾ ಆನೆಲದ್ದಿ ಕಾಫಿ ಬಿಯರ್ ತಯಾರಿಸಲಿಕ್ಕಾಗಿ. ಇವೆರಡೂ ವಿಚಿತ್ರ ಬಳಕೆಗಳು ಎಂದು ಕೆಲವರು ಹುಬ್ಬೇರಿಸಬಹುದು; ಹಲವರು ಇದೇನು ಅಸಹ್ಯ ಬಳಕೆ ಎಂದು ಮುಖ ತಿರುಗಿಸಬಹುದು. ಆದರೆ ಇವೆರಡೂ ಲಾಭ ಗಳಿಸುವ ಯಶಸ್ವಿ ಉದ್ಯಮಗಳಾಗಿ ಬೆಳೆದಿವೆ. ಜೊತೆಗೆ, ೨೧ನೇ ಶತಮಾನದ ಪ್ರಧಾನ ವನ್ಯಜೀವಿ ರಕ್ಷಣಾ ಹೋರಾಟಗಳಲ್ಲಿ ಒಂದಾದ “ಆನೆ ಸಂರಕ್ಷಣೆ” ಬಗ್ಗೆ ಅಂತರರಾಷ್ಟ್ರೀಯ ಜಾಗೃತಿ ಮೂಡಿಸಲು ಸಹಕರಿಸಿವೆ.

ಶಶಿಶೇಖರ್ ಪಾಠಕ್ ಮುಂಬೈಯಲ್ಲಿ ತಮ್ಮ ಬೈಸಿಕಲಿನಲ್ಲಿ ಸವಾರಿ ಹೊರಟರೆ, ಪ್ರತಿಯೊಂದು ಟ್ರಾಫಿಕ್ ಲೈಟ್ ಜಂಕ್ಷನಿನಲ್ಲಿ ಜನರು ಕುತೂಹಲದಿಂದ ನೋಡುವುದು ಅವರ ಬೈಸಿಕಲನ್ನು. ಆಗ “ಇದು ಬಿದಿರಿನ ಬೈಸಿಕಲ್” ಎಂದು ಶಶಿಶೇಖರ್ ಹೇಳುತ್ತಿರುವಂತೆ ಅಚ್ಚರಿಯಿಂದ ಕಣ್ಣರಳಿಸುತ್ತಾರೆ ನೋಡುಗರು.
“ಬಿದಿರಿನಿಂದ ಬೈಸಿಕಲ್ ಮಾಡಲಿಕ್ಕಾಗುತ್ತದೆಯೇ?” ಎನ್ನುತ್ತಾ ನೋಡುಗರು ಇವರ ಬೈಸಿಕಲನ್ನು ಕೈಯಿಂದ ತಟ್ಟಿ ನೋಡುತ್ತಾರೆ. ಅದು ನಿಜಕ್ಕೂ ಬಿದಿರಿನ ಬೈಸಿಕಲ್ ಎಂಬುದು ಖಚಿತವಾಗುತ್ತಿದ್ದಂತೆ, ನೋಡುಗರ ಮುಖದಲ್ಲೊಂದು ಸಮಾಧಾನದ ಭಾವ.
ಇದೀಗ ಐದು ವರುಷಗಳಿಂದ ಶಶಿಶೇಖರ್ ಬಿದಿರಿನ ಬೈಸಿಕಲುಗಳನ್ನು ತಯಾರಿಸುತ್ತಿದ್ದಾರೆ. ಈ ಗೃಹ ಉದ್ದಿಮೆಗೆ ಅವರಿಟ್ಟ ಹೆಸರು “ಬಾಂಬೂಚಿ”.
ಇದೆಲ್ಲ ಶುರುವಾದದ್ದು ೨೦೧೩ರಲ್ಲಿ – ಪುಣೆಯ ದಕ್ಷಿಣ ದಿಕ್ಕಿನಲ್ಲಿ ಭೋರ್ ತಾಲೂಕಿನ ಮೂಲೆಯಲ್ಲಿ ಶಶಿಶೇಖರ್ ಒಂದು ತುಂಡು ಜಮೀನು ಖರೀದಿಸಿದಾಗ. ಅಲ್ಲಿ ಎತ್ತಕಂಡರತ್ತ ಬಿದಿರುಮೆಳೆಗಳು. ಶಶಿಶೇಖರ್ ಮತ್ತು ಪತ್ನಿ ದೇವಿಕಾ ಈ ಬಿದಿರನ್ನು ಚೆನ್ನಾಗಿ ಬಳಸಲು ನಿರ್ಧರಿಸಿದರು.
ಬಿದಿರಿನಿಂದ ಮೇಜು – ಕುರ್ಚಿ – ವಸ್ತುಗಳನ್ನಿಡುವ ನಿಲುಗಂಬ ತಯಾರಿಸೋಣ ಎಂಬ ಯೋಚನೆ ಅವರಿಗೆ. ಆದರೆ, ಈಗಾಗಲೇ ಹಲವಾರು ಘಟಕಗಳು ಇವನ್ನು ತಯಾರಿಸುತ್ತಿರುವ ಕಾರಣ ಆ ಯೋಚನೆ ಕೈಬಿಟ್ಟರು. ಅದೊಂದು ದಿನ ಟೆಲಿವಿಷನ್ ಕಾರ್ಯಕ್ರಮ ನೋಡುತ್ತಿದ್ದಾಗ ಒಂದು ಬಿದಿರಿನ ಬೈಸಿಕಲ್ ಕಾಣಿಸಿತು. ತಕ್ಷಣವೇ ಪಾಠಕ್ ದಂಪತಿ ನಿರ್ಧರಿಸಿದರು: ಇದುವೇ ನಮ್ಮ ಮುಂದಿನ ಯೋಜನೆ ಎಂದು.
ಭಾರತೀಯ ವಾಯುದಳದ ಮಾಜಿ ಪೈಲೆಟ್ ಶಶಿಶೇಕರ್, ಈಗಲೂ ಆಗಾಗ ಬೇರೆ ವಿಮಾನಗಳ ಚಾಲನೆ ಮಾಡುತ್ತಿದ್ದಾರೆ; ಅವರ ಬಿಡುವಿನ ಸಮಯವೆಲ್ಲ ಬಿದಿರಿನ ಬೈಸಿಕಲ್ ತಯಾರಿಗೆ ಮೀಸಲು.

ದೇಶದ ರಾಜಧಾನಿ ಡೆಲ್ಲಿಯಲ್ಲಿ ಎಲ್ಲರಿಗೂ ಉಸಿರುಗಟ್ಟುತ್ತಿದೆ. ಅಲ್ಲಿ ಎಲ್ಲೆಡೆ ಹೊಗೆ ತುಂಬಿದೆ. ಬಹುಪಾಲು ಜನರು ಮೂಗಿಗೆ ಕವಚ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಈಗ ೨೦೧೨ನೇ ಇಸವಿಯಿಂದ ಇಂತಹ ಅಸಹನೀಯ ಪರಿಸ್ಥಿತಿ ಅಕ್ಟೋಬರ್ – ನವಂಬರ್ ತಿಂಗಳುಗಳಲ್ಲಿ ಮರುಕಳಿಸುತ್ತಿದೆ.
ಇದಕ್ಕೆ ಮುಖ್ಯ ಕಾರಣ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ, ಭತ್ತದ ತೆನೆ ಕೊಯ್ಲಿನ ನಂತರ ಉಳಿಯುವ ಹುಲ್ಲಿಗೆ ಬೆಂಕಿ ಕೊಟ್ಟು ಸುಡುತ್ತಿರುವುದು. ಕೆಲಸದಾಳುಗಳಿಂದ ಅಥವಾ ಯಂತ್ರಗಳಿಂದ ಆ ಹುಲ್ಲನ್ನು ಕೊಯ್ಯುವ ವೆಚ್ಚ ಭರಿಸಲು ತಯಾರಿಲ್ಲದ ರೈತರು ಅದನ್ನು ಸುಟ್ಟು ಹಾಕುತ್ತಾರೆ. ರೈತರ ಈ ಅಭ್ಯಾಸವನ್ನು ನಿಲ್ಲಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ; ಅವುಗಳಿಂದ ಹೆಚ್ಚೇನೂ ಪ್ರಯೋಜನವಾಗಿಲ್ಲ. ಸರಕಾರಗಳ ವಿನಂತಿ ಮತ್ತು ದಂಡಕ್ಕೆ ಬೆಲೆಯಿಲ್ಲದಂತಾಗಿದೆ. ಹೊಲದ ಹುಲ್ಲು ಕತ್ತರಿಸುವ ಯಂತ್ರಗಳಿಗೆ ಸಬ್ಸಿಡಿ ನೀಡುವ ಕೇಂದ್ರ ಸರಕಾರದ ಯೋಜನೆಯೂ ನೆಲ ಕಚ್ಚಿದೆ. ಹಾಗಾಗಿ, ಡೆಲ್ಲಿ ಮತ್ತು ಸುತ್ತಲಿನ ಉತ್ತರ ಭಾರತದ ವಿಶಾಲ ವಲಯದಲ್ಲಿ ವಿಷಭರಿತ ಹೊಗೆಮಂಜು ಕವಿದಿದೆ.
ಇಂತಹ ಪರಿಸ್ಥಿತಿಯಲ್ಲಿ, ಹುಲ್ಲಿನಿಂದ ಬಹು-ಉಪಯೋಗಿ ತಟ್ಟೆ-ಲೋಟ ತಯಾರಿಸುವ ಮೂರು ಆವಿಷ್ಕಾರಗಳು ಆಶಾದಾಯಕ ಬೆಳವಣಿಗೆ.
ಐಐಟಿ, ಹೊಸದಿಲ್ಲಿಯ ಮೂವರು ಪದವೀಧರರು ಒಂದು ಯಂತ್ರ ರೂಪಿಸಿದ್ದಾರೆ. ಇದು, ರೈತರು ಹುಲ್ಲು ಕತ್ತರಿಸಲು ಪ್ರೇರಣೆ ಆದೀತು. ಅಂಕುರ್ ಕುಮಾರ್, ಕನಿಕ ಪ್ರಜಾತತ್ ಮತ್ತು ಪ್ರಚೀರ್ ದತ್ತ – ಇವರು ರೂಪಿಸಿದ ಆ ಯಂತ್ರ ಭತ್ತದ ಹುಲ್ಲನ್ನು ನಾರಿನ ವಸ್ತುವಾಗಿ ಪರಿವರ್ತಿಸುತ್ತದೆ. ತಟ್ಟೆ, ಲೋಟ ಉತ್ಪಾದಿಸುವ ಘಟಕಗಳಿಗೆ ಈ ನಾರಿನ ವಸ್ತು ಉತ್ತಮ ಕಚ್ಚಾಮಾಲು. ಭತ್ತದ ಹುಲ್ಲಿನಲ್ಲಿ ಸಿಲಿಕಾ ಅಂಶ ಅಧಿಕ; ಇದರಿಂದಾಗಿ ಭತ್ತದ ಹುಲ್ಲು ಕೊಳೆಯುವುದು ನಿಧಾನ.
“ನಮ್ಮ ಯಂತ್ರ ಪರಿಸರಸ್ನೇಹಿ ರಾಸಾಯನಿಕ ಬಳಸಿ, ಭತ್ತದ ಹುಲ್ಲಿನಿಂದ ಸಿಲಿಕಾವನ್ನು ಬೇರ್ಪಡಿಸುತ್ತದೆ; ಆಗ ಭತ್ತದ ಹುಲ್ಲು ಮೆದುವಾಗಿ, ಬೇರೆ ಬಳಕೆಗೆ ಸೂಕ್ತವಾಗುತ್ತದೆ” ಎನ್ನುತ್ತಾರೆ ಅಂಕುರ್ ಕುಮಾರ್. ಆ ರಾಸಾಯನಿಕದ ವಿವರ ಅವರು ನೀಡುವುದಿಲ್ಲ; ಯಾಕೆಂದರೆ, ಅವರ ಘಟಕ ಕ್ರಿಯಾ ಲ್ಯಾಬ್ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.

Title: The Book of Indian Trees

Author: K. C. Sahni

Publisher: Bombay NH Society & Oxford University Press

Year: 2017 (7th Reprint)          Pages: 12 + 232         Rs.395/-

We depend on plants and trees for our survival - for food, clothing, shelter, furniture etc. UN Conference on Environment, held in Stockholm in 1972 marked the beginning of serious discussion about  the importance of trees. The subject was discussed at length at the Rio de Janeiro Un Conference on Environment, held twenty years after the Stockholm Conference. In view of the ecological imperatives such as the urgent need to control pollution and avert global warming, the great value of trees should be understood by all.

Thus, there is a need to provide information to common people about the importance trees. This book published by BNHS and Oxford Printing Press fulfils the said need.  The fact that the book is reprinted every year since 2013 strengthens this statement.

The book is intended as a popular guide describing the characteristics and distribution of trees of the Indian subcontinent. It covers 7 countries of South Asia and Southeast Asia: India, Pakistan, Bangladesh, Nepal, Bhutan, Myanmar and Sri Lanka. The main purpose of this book is to provide a means for the layman to become acquainted with the main trees of our forests and thus foster and interest in forestry and natural history.

Title: Trees of India

Author: Pippa Mukherjee

Published by: Oxford University Press, New Delhi

Pages: 99                Rs.295/-           First published 2008


This book describes and illustrates some of the beautiful and useful common trees of India. These trees are seen by road sides, in parks and countryside.

The book is written in a very simple language . A simple glossary has been given at the end of the book. The author rightly claims that it is meant to create interest and not to confuse either a child or a non-botanist with complex scientific terms.

The book presents 41 trees with excellent photos and illustrations. Hence, it can create an awareness and interest in both young and old alike. It also lists most important uses of trees for man, animals, birds and, most vitally, for the environment.

Some of the trees presented in this attractive book are: Neem, Badam, Babool, Coral Wood, Silk Cotton, Palmyra Palm, Flame of the forest, Casurina, Coconut Palm, Canon-ball, Gulmohar, Rain tree, Banyan, Peepal, Drumstick, Temple tree, Mast tree, Tulip, Mango, Tamarind and Teak tree.

Title: Social Life of Plants

Author: Sukanya Datta

Published by: National Book Trust, India, New Delhi

Pages: 92                 Rs:95/-          First Edition 2000 & 5 Reprints

This book offers a startling new perspective on the world of plants, presenting an atypical point of view that ignites a sense of wonder as it explores the plant world.

For example, the exclusively nector-feeding honeyeaters, like flowerpeckers also pollinate the flowers they feed on. Along with parrots, the honeyeaters are responsible for the pollination of most  of the flowering trees and shrubs in Australia. The close relationship between the birds and the flowers cannot be overestimated. Hummingbirds, orioles, shrikes, weaverbirds, sunbirds, honeyeaters, honeycreepers and other birds play a stellar role in pollination. Some flowers seem to be perfectly adapted for pollination by birds. For example, the bird of paradise flower.

The colours of the flowers serve to attract the birds to the copious supply of nectar at the base of the corolla’s tubes. The nectar of the bird-pollinated flowers is much weaker than that of insect-pollinated flowers. Researchers are of the opinion that insects are probably not attracted at all to bird-flowers.

Title: Gardens

Author: Laeeq Futehally

Published by: National Book Trust, India, New Delhi

Pages:92            Rs.60/-          First Edition: 1978,   3rd Edition: 1997       Reprints: 4

Gardens are said to be “lung spaces of crowded cities”. Keeping that in view, in this standard book on gardening, the author makes an attempt to discuss some of the considerations in laying out and developing a garden like social, aesthetic, horticultural and environmental. These have to be carefully balances by those whose responsibility is to create satisfactory environments in our country.

However, the book does not deal with the many-dimensional problems faced by those in charge of laying out and maintaining public gardens in India. It is not a handbook of horticultural information.

The book contains 8 pages of colour-photos and 24 pages of Black & White photos with foot-notes to drive home the issues presented by the photos. It also contains useful insights for domestic gardener.

The author is an ardent nature lover and freelance writer. Her life-long interest in garden design found fulfilment when she was in charge of landscaping and planning the two gardens of Powai and Vihar near Mumbai.

Pages