78. ಉದ್ಯಾನದ ಕೆಲಸಗಾರನ ಸಕಾರಾತ್ಮಕ ಕೆಲಸ

ಅದೊಂದು ದಿನ ರಾಜು ತನ್ನ ಗೆಳೆಯರೊಂದಿಗೆ ಮನೆಯ ಹತ್ತಿರದ ಉದ್ಯಾನಕ್ಕೆ ಹೋದ. ಅಲ್ಲಿನ ಕೆಲಸಗಾರ ಹಾಡು ಹಾಡುತ್ತಾ ಉದ್ಯಾನವನ್ನು ಶುಚಿ ಮಾಡುತ್ತಿದ್ದ. ಇವರಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದ ಅವನನ್ನು ಕಂಡು ಅದೇನು ಅನಿಸಿತೋ? ಅವರು ತಮ್ಮ ಜೇಬಿನಲ್ಲಿದ್ದ ಕಾಗದದ ಹಾಳೆಯನ್ನು ಚೂರುಚೂರು ಮಾಡಿ ಸಿಕ್ಕಸಿಕ್ಕಲ್ಲಿ ಎಸೆಯತೊಡಗಿದರು.

ಇದನ್ನು ನೋಡಿದ ಕೆಲಸಗಾರ ಸಿಟ್ಟು ಮಾಡಿಕೊಳ್ಳಲಿಲ್ಲ. ಬದಲಾಗಿ ಅವನು ಹಾಡು ಹಾಡುತ್ತಲೇ ಶುಚಿ ಮಾಡುವ ಕೆಲಸ ಮುಂದುವರಿಸಿದ. ಆಗ ಕೆಲವು ಹಿರಿಯರೂ ಉದ್ಯಾನಕ್ಕೆ ಬಂದರು. ಹಾಡು ಹಾಡುತ್ತಾ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದ್ದ ಕೆಲಸಗಾರನನ್ನು ಕಂಡು ಅವರಿಗೆ ಸೋಜಿಗವೆನಿಸಿತು. ಆದರೆ ತನ್ನ ಕೆಲಸದಲ್ಲಿ ಅವನ ಸಂತೋಷ ಪಡುವುದನ್ನು ಕಂಡು, ಅವರೂ ಅವನ ಕೆಲಸದಲ್ಲಿ ಕೈಜೋಡಿಸಿದರು. ರಾಜು ಮತ್ತು ಅವನ ಗೆಳೆಯರು ಎಸೆದಿದ್ದ ಕಾಗದದ ಚೂರುಗಳನ್ನು ಹಿರಿಯರೂ ಹೆಕ್ಕಿಹೆಕ್ಕಿ ಕಸದಬುಟ್ಟಿಗೆ ಹಾಕಿದರು.

ಇದನ್ನೆಲ್ಲ ಕಂಡು ರಾಜು ಮತ್ತು ಅವನ ಗೆಳೆಯರಿಗೆ ನಾಚಿಕೆಯಾಯಿತು. ತಾವು ಎಸೆದಿದ್ದ ಕಾಗದದ ಚೂರುಗಳನ್ನು ಈಗ ಅವರೂ ಹೆಕ್ಕಿ ಕಸದ ಬುಟ್ಟಿಗೆ ಹಾಕತೊಡಗಿದರು. ಮಾಡುವ ಕೆಲಸ ಯಾವುದೇ ಆಗಿದ್ದರೂ ಅದರಲ್ಲಿ ಸಂತೋಷ ಕಂಡುಕೊಳ್ಳಲು ಸಾಧ್ಯ ಎಂಬುದನ್ನು ಅವರು ಅರ್ಥ ಮಾಡಿಕೊಂಡರು. ಮುಂದೆಂದೂ ಅವರು ಕೆಲಸಗಾರರಿಗೆ ತೊಂದರೆ ಮಾಡಲಿಲ್ಲ.