ADDOOR

79. ಪಾಠ ಕಲಿತ ರಾಜಕುಮಾರ

Published on Wednesday, August 09, 2023 - 11:49
79. ಪಾಠ ಕಲಿತ ರಾಜಕುಮಾರ

ರಾಜಕುಮಾರ ಚಂದ್ರಸೇನ ಅಪ್ರಾಮಾಣಿಕ ಮತ್ತು ಕೆಟ್ಟ ಬುದ್ಧಿಯ ಹುಡುಗ ಎಂಬುದು ಮಹಾರಾಜನಿಗೆ ಗೊತ್ತಿರಲಿಲ್ಲ. ಅದೊಂದು ದಿನ ಅವರಿಬ್ಬರೂ ಬೇಟೆಯಾಡಲು ಹೋದರು. ಅನಂತರ ಹತ್ತಿರದ ಒಂದು ಹಳ್ಳಿಗೆ ಹೋಗಿ ತಲಪಿ, ಅಲ್ಲೇ ರಾತ್ರಿ ಕಳೆಯಲು ನಿರ್ಧರಿಸಿದರು.

ರಾತ್ರಿಯೂಟದ ನಂತರ ಮಹಾರಾಜ ನಿದ್ದೆ ಮಾಡಿದ. ಆಗ ರಾಜಕುಮಾರ ಹಳ್ಳಿಯಲ್ಲಿ ಸುತ್ತಾಡುತ್ತಾ ಹಳ್ಳಿಗರಿಗೆ ಬಹಳ ತೊಂದರೆ ನೀಡತೊಡಗಿದ. ಆಗ ರಾಜನಿಗೆ ಎಚ್ಚರವಾಯಿತು. ಅವನು ನಡೆದು ಬಂದು, ಯುವರಾಜನ ಕಿತಾಪತಿಗಳನ್ನು ಕಣ್ಣಾರೆ ಕಂಡ. ಆಗ ತನ್ನನ್ನೇ ಹೋಲುತ್ತಿದ್ದ ಹುಡುಗನೊಬ್ಬ ಪಕ್ಕದಲ್ಲಿ ನಿಂತದ್ದನ್ನು ರಾಜಕುಮಾರ ಗಮನಿಸಿದ. ತಕ್ಷಣವೇ ಆ ಹುಡುಗನನ್ನು ಮಹಾರಾಜನಿಗೆ ತೋರಿಸುತ್ತಾ ರಾಜಕುಮಾರ ಹೇಳಿದ, “ತಂದೆಯವರೇ, ಈ ಎಲ್ಲ ಕಿತಾಪತಿಗಳನ್ನು ಮಾಡಿದವನು ಇವನೇ."

ರಾಜಕುಮಾರನ ಮಾತನ್ನು ಮಹಾರಾಜ ನಂಬಲಿಲ್ಲ. ರಾಜಕುಮಾರ ಸುಳ್ಳು ಹೇಳುತ್ತಿರುವುದು ಖಚಿತವಾದಾಗ ಅವನಿಗೊಂದು ಪಾಠ ಕಲಿಸಬೇಕೆಂದು ಮಹಾರಾಜ ನಿರ್ಧರಿಸಿದ. ಹಾಗಾಗಿ ಹಳ್ಳಿಯ ಹುಡುಗನೇ ತನ್ನ ನಿಜವಾದ ಮಗನೆಂದು ಮಹಾರಾಜ ಘೋಷಿಸಿದ. ಅನಂತರ ಹಳ್ಳಿಯ ಹುಡುಗನನ್ನು ಅರಮನೆಗೆ ಕರೆದೊಯ್ದ ಮತ್ತು ನಿಜವಾದ ರಾಜಕುಮಾರನನ್ನು ಆ ಹಳ್ಳಿಯಲ್ಲೇ ಬಿಟ್ಟು ಬಂದ. ಬೇರೆ ದಾರಿ ಕಾಣದೆ ರಾಜಕುಮಾರ ಆ ಹಳ್ಳಿಯಲ್ಲಿ ದಿನಗಳೆಯ ತೊಡಗಿದ. ಕ್ರಮೇಣ ತಾನು ಸುಳ್ಳು ಹೇಳಿದ್ದಕ್ಕಾಗಿ ಮತ್ತು ತನ್ನ ಅಪ್ರಾಮಾಣಿಕತೆಗೆ ಪಶ್ಚಾತ್ತಾಪ ಪಟ್ಟ. ಅತ್ತ ಅರಮನೆಯಲ್ಲಿ ಹಳ್ಳಿಯ ಹುಡುಗ ತನ್ನ ಹಳ್ಳಿಗೆ ಹಿಂತಿರುಗಿ ತಂದೆತಾಯಿಯ ಜೊತೆಗಿರುತ್ತೇನೆಂದು ಒತ್ತಾಯಿಸತೊಡಗಿದ. ಆದ್ದರಿಂದ ಮಹಾರಾಜ ಅವನನ್ನು ಅವನ ಹಳ್ಳಿಗೆ ಕರೆದೊಯ್ದ. ಆಲ್ಲಿದ್ದ ನಿಜವಾದ ರಾಜಕುಮಾರನ ಜೊತೆ ಮಾತನಾಡಿದಾಗ ಅವನು ಪಾಠ ಕಲಿತಿದ್ದಾನೆಂದು ಮಹಾರಾಜ ತಿಳಿದುಕೊಂಡ. ಹಾಗಾಗಿ ಅವನನ್ನು ಕ್ಷಮಿಸಿ, ಅರಮನೆಗೆ ವಾಪಾಸು ಕರೆತಂದ. ಅನಂತರ, ರಾಜಕುಮಾರ ಮತ್ತು ಹಳ್ಳಿಯ ಹುಡುಗ ಜೀವಮಾನದ ಗೆಳೆಯರಾಗಿ ಬಾಳಿದರು.