ADDOOR

73. ಪ್ರಾಣಿಗಳ ಬಗ್ಗೆಯೂ ಕರುಣೆ ಇರಲಿ

Published on Wednesday, August 09, 2023 - 11:38
73. ಪ್ರಾಣಿಗಳ ಬಗ್ಗೆಯೂ ಕರುಣೆ ಇರಲಿ

ವಯಸ್ಸಾದ ಗೋದಾವರಿ ಮತ್ತು ನರ್ಮದಾ ಉದ್ಯಾನದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆಗ ಅವರೊಂದು ಬೆಕ್ಕನ್ನು ಕಂಡರು. ಅದು ಒಂದು ಮರದ ಬೊಡ್ದೆಯ ಸೀಳಿನಲ್ಲಿ ಸಿಲುಕಿಕೊಂಡಿತ್ತು. ಅದರಿಂದ ತಪ್ಪಿಸಿಕೊಳ್ಳಲು ಒದ್ದಾಡುತ್ತಿತ್ತು. ಗೋದಾವರಿ ಅದಕ್ಕೆ ಸಹಾಯ ಮಾಡಲಿಕ್ಕಾಗಿ ಅದರ ಮುಂಗಾಲನ್ನು ಹಿಡಿದು ಎಳೆದಳು.

ಆಗ ಬೆಕ್ಕು ಹೆದರಿಕೊಂಡು ಗೋದಾವರಿಗೆ ಪರಚಿತು. ಗೋದಾವರಿಯ ಬಲಗೈಗೆ ಗಾಯವಾಗಿ ರಕ್ತ ಬಂತು. ಇದನ್ನು ಕಂಡು ನರ್ಮದಾ ಹೇಳಿದಳು, "ಆ ಬೆಕ್ಕಿಗೆ ಸಹಾಯ ಮಾಡಬೇಡ. ಅದು ಅಲ್ಲಿಂದ ಹೇಗಾದರೂ ತಪ್ಪಿಸಿಕೊಳ್ಳುತ್ತದೆ.” ಆದರೆ ಗೋದಾವರಿ ಹಿಂದೆ ಸರಿಯಲಿಲ್ಲ. ನಿಧಾನವಾಗಿ ಬೆಕ್ಕಿನ ಎರಡೂ ಮುಂಗಾಲುಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊಂಡು ಅದನ್ನು ಮರದ ಬೊಡ್ದೆಯ ಸೀಳಿನಿಂದ ಹೊರಕ್ಕೆ ಎಳೆದಳು. ತಕ್ಷಣವೇ ಆ ಬೆಕ್ಕು ಅಲ್ಲಿಂದ ಓಡಿ ಹೋಯಿತು.

ಗೋದಾವರಿ ನರ್ಮದಾಳಿಗೆ ಹೇಳಿದಳು, "ಆ ಬೆಕ್ಕಿಗೆ ಜೀವ ಉಳಿದರೆ ಸಾಕಾಗಿತ್ತು. ಅದು ಹೆದರಿಕೆಯಿಂದ ನನಗೆ ಪರಚಿತು. ಹಾಗಂತ ನಾನು ಅದನ್ನು ಅಲ್ಲೇ ಬಿಟ್ಟು ಹೋಗಿದ್ದರೆ ಅದು ಬದುಕುತ್ತಿತ್ತೋ ಇಲ್ಲವೋ? ನಾವು ಪ್ರಾಣಿಗಳ ಬಗ್ಗೆಯೂ ಕರುಣೆ ತೋರಬೇಕು."